ಜೂ.08 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ

 ಜೂ.08 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ
Share this post

ಮಂಗಳೂರು,ಜೂ.07, 2022: 110/33/11ಕೆ.ವಿ ಕುಲಶೇಖರ ಉಪಕೇಂದ್ರದಿಂದ ಹೊರಡುವ 11ಕೆ.ವಿ ಜೆಪ್ಪಿನ ಮೊಗರು ಫೀಡರ್‍ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿದೆ.

ಆದ ಕಾರಣ ಜೂ.08ರ ಬೆಳಿಗ್ಗೆ 10 ರಿಂದ 2ರವರೆಗೆ ಬಜಾಲ್, ಪಡೀಲ್, ವೀರನಗರ, ಫೈಸಲ್ನಗರ, ಕಲ್ಲಕಟ್ಟೆ, ತುಂಗನಗರ, ಹೇಮಾವತಿನಗರ, ಪಲ್ಲಕೆರೆ, ಕರ್ಮಾರ್, ಜೆ.ಎಂ.ರೋಡ್, ಪಕ್ಕಲಡ್ಕ, ಕುಡ್ತಡ್ಕ, ಸಾಲಿಯನ್ ರೈಸ್ ಮಿಲ್, ತೋಫಿಲ, ಜಲ್ಲಿಗುಡ್ಡೆ, ಜಯನಗರ, ವಿಜಯನಗರ, ಕಟ್ಟಪುಣಿ, ದರ್ಬಾರ್ ಗುಡ್ಡೆ, ಭಟ್ರಬೆಟ್ಟು, ಪ್ರಗತಿನಗರ, ಕೆ.ಎಚ್.ಬಿ ಕಾಲೋನಿ, ಎಕ್ಕೂರು, ಬಜಾಲ್ ಬೊಲ್ಲ, ಬಜಾಲ್ ಚರ್ಚ್, ಆದರ್ಶ ನಗರ, ಆದರ್ಶ ಶಾಲೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.

ಕುದ್ರೋಳಿ:
33/11 ಕೆವಿ ಕುದ್ರೋಳಿ ಉಪಕೇಂದ್ರದಿಂದ ಹೊರಡುವ 11ಕೆ.ವಿ ಕಾಸ್ಟ್ರ್ರೀಟ್ ಫೀಡರ್‍ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.

ಆದ ಕಾರಣ ಜೂ.08 ರ ಬೆಳಿಗ್ಗೆ 10 ರಿಂದ 5ರವರೆಗೆ ನ್ಯೂಫೀಲ್ಡ್ ಸ್ಟ್ರೀಟ್, ಕಾಸ್ಟ್ರ್ರೀಟ್, ದಯಾನಂದ ಪೈ ಕಾಲೇಜ್, ಮಹಾಮಾಯಿ ಟೆಂಪಲ್ ರಸ್ತೆ, ಕಾರ್ಪೋರೇಶನ್ ಬ್ಯಾಂಕ್, ಗೋಪಾಲ ಕೃಷ್ಣ ಟೆಂಪಲ್ ರೋಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.

ದೇರೆಬೈಲ್, ಮುಲ್ಲಕಾಡು:
220/110/11 ಕೆ.ವಿ ಎಸ್.ಆರ್.ಎಸ್ ಕಾವೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ ದೇರೆಬೈಲ್, ಮುಲ್ಲಕಾಡು ಮತ್ತು ಮಾಲೆಮಾರ್ ಫೀಡರ್‍ಗಳಲ್ಲಿ ತುರ್ತು ನಿರ್ವಹಣಾ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.

ಪ್ರಯುಕ್ತ ಜೂ.08 ರ ಬೆಳಿಗ್ಗೆ 10 ರಿಂದ 5ರವರೆಗೆ ದೇರೆಬೈಲ್ ಕೊಂಚಾಡಿ, ಕುಂಟಿಕಾನ, ಪ್ರಶಾಂತನಗರ,  ಎ.ಜೆ ಹಾಸ್ಪಿಟಲ್, ಮುಲ್ಲಕಾಡು, ಮಾಲೆಮಾರ್, ಲೋಹಿತ್ ನಗರ, ಮಾಲಾಡಿ, ಜಲ್ಲಿಗುಡ್ಡೆ,  ಕಾವೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುವುದು.

ಈಶ್ವರಕಟ್ಟೆ, ಪೆರಾರ:
220 ಕೆವಿ ಎಂ.ಎಸ್.ಇ.ಝೆಡ್ ಉಪಕೇಂದ್ರದಿಂದ ಹೊರಡುವ 11 ಕೆವಿ ಈಶ್ವರಕಟ್ಟೆ, ಪೆರಾರ, ಸುಂಕದಕಟ್ಟೆ, ಬಜಪೆ ಟೌನ್, ಪೆರ್ಮುದೆ, ಮಳವೂರು ವಾಟರ್ ಸಪ್ಲೈ, ಕಟೀಲ್ ಟೆಂಪಲ್ ಫೀಡರ್ ಗಳಲ್ಲಿ ತುರ್ತು ನಿರ್ವಹಣಾ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.

ಈ ನಿಟ್ಟಿನಲ್ಲಿ ಜೂ.08ರ ಬೆಳಿಗ್ಗೆ 10 ರಿಂದ 4.30ರವರೆಗೆ ಈಶ್ವರ ಕಟ್ಟೆ, ಮುರ, ಶಾಸ್ತಾವು, ಕಿನ್ನಿಕಂಬ್ಳ, ಮೂಡುಪೆರಾರ, ಕೊಳಪಿಲ, ಅರಿಕೆಪದವು, ಶಾಲೆಪದವು, ಕೊಂಪದವು, ಕರಿಕುಮೇರು, ಕಾಪಿಕಾಡು, ನೆಲ್ಲಿಗುಡ್ಡೆ, ಕತ್ತಲ್ ಸಾರ್, ಸೌಹಾರ್ದ ನಗರ, ಸಿದ್ದಾರ್ಥ ನಗರ, ಜರಿನಗರ, ಅಂಬಿಕಾನಗರ, ಸುಂಕದಕಟ್ಟೆ, ಬಜಪೆ, ಪೆರ್ಮುದೆ, ಭಟ್ರಕೆರೆ, ಮಳವೂರು, ಎಕ್ಕಾರು, ಕಟೀಲು ದೇವಸ್ಥಾನ, ನೀರುಡೆ, ನೆಲ್ಲಿತೀರ್ಥ, ಅನಂತಗುರಿ, ಮೆಣಸುಕಾನ, ಬರಂಕಿಲ, ಮುಡಿಗಾಡು, ಆಮ್ಲಟ ಪದವು, ಕಾಂತಾರಬೈಲು, ಮುಚ್ಚೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುವುದು.

ಮೂಡಬಿದ್ರೆ:
110/11 ಕೆ.ವಿ ಮೂಡಬಿದ್ರೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಬೆಳುವಾಯಿ ಫೀಡರ್‍ನಲ್ಲಿ ತುರ್ತು ನಿರ್ವಹಣಾ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.

ಆದ ಕಾರಣ ಜೂ.08ರ ಬೆಳಿಗ್ಗೆ 10 ರಿಂದ 5ರವರೆಗೆ ಕಾನ, ಕಲ್ಲೋಳಿ, ನಡಿಗುಡ್ಡೆ, ಕಾಂತಾವರ ಕ್ರಾಸ್, ಬೆಳುವಾಯಿ, ಬನ್ನಡ್ಕ, ಕಾಯರ್ ಕಟ್ಟೆ, ಆಜಾದ್ ನಗರ, ಕರಿಯನಂಗಡಿ, ಮಲೆಬೆಟ್ಟು, ಮಂಜನಕಟ್ಟೆ, ಕಾಯಿದೆ, ಕೆಸರ್ ಗದ್ದೆ, ಪೆಲಕುಂಜ, ಮೂಡಾಯಿಕಾಡು, ಬೆಳುವಾಯಿ ಚರ್ಚ್, ಇರ್ವತ್ತೂರು ಕ್ರಾಸ್, ಗುಂಡುಕಲ್ಲು, ಮೂಡುಮಾರ್ನಾಡು, ಕೆಲ್ಲಪುತ್ತಿಗೆ, ದರೆಗುಡ್ಡೆ, ಅರಸುಕಟ್ಟೆ, ಪಣಪಿಲ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುವುದು ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!