ಜಿಲ್ಲಾಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯ ವಿಜೇತರು
ಮಂಗಳೂರು, ಸೆ.20, 2025: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಜಯಂತಿ ಅಂಗವಾಗಿ ನಡೆದ ಜಿಲ್ಲಾಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ ಫಲಿತಾಂಶ ಪ್ರಕಟವಾಗಿದೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಡೆದ ಪ್ರೌಢಶಾಲೆ, ಪದವಿಪೂರ್ವ ಹಾಗೂ ಪದವಿ/ಸ್ನಾತಕೋತ್ತರ ವಿಭಾಗಗಳಲ್ಲಿ ನಡೆದ ಈ ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ವಿಜೇತರ ವಿವರ:
ಪ್ರೌಢಶಾಲೆ ವಿಭಾಗ
- ಪ್ರಥಮ – ವರ್ಷಿಣಿ, 9ನೇ ತರಗತಿ, ಸರಕಾರಿ ಪ್ರೌಢಶಾಲೆ, ಸಿದ್ಧಕಟ್ಟೆ, ಬಂಟ್ವಾಳ ತಾಲೂಕು
- ದ್ವಿತೀಯ – ದೀಪಕ್ ಆರ್. 9ನೇ ತರಗತಿ, ಸರಕಾರಿ ಪ್ರೌಢಶಾಲೆ, ಗುತ್ತಿಗಾರು, ಸುಳ್ಯ ತಾಲೂಕು
- ತೃತೀಯ – ರಮ್ಯ ಎಸ್. ಪೂಜಾರಿ, 9ನೇ ತರಗತಿ, ಜೈನ್ ಪ್ರೌಢಶಾಲೆ, ಮೂಡಬಿದ್ರೆ
ಪದವಿಪೂರ್ವ ವಿಭಾಗ:
- ಪ್ರಥಮ – ಸುಚಿತ್ರಾ, ದ್ವಿತೀಯ ಪಿ.ಯು.ಸಿ.(ವಿಜ್ಞಾನ) ಸರಕಾರಿ ಪದವಿಪೂರ್ವ ಕಾಲೇಜು, ಬೆಂಜನಪದವು, ಬಂಟ್ವಾಳ ತಾಲೂಕು
- ದ್ವಿತೀಯ -ಶಾರೋನ್.ಎ. ದ್ವಿತೀಯ ಪಿ.ಯು.ಸಿ.(ಊಇಃಂ) ಸೇಕ್ರೆಡ್ ಹಾರ್ಟ್ ಪದವಿಪೂರ್ವ ಕಾಲೇಜು, ಮಡಂತ್ಯಾರು, ಬೆಳ್ತಂಗಡಿ ತಾಲೂಕು
- ತೃತೀಯ – ಕೆ.ಎಂ. ಫಾತಿಮತ್ ತ್ವೈಬಾ, ದ್ವಿತೀಯ ಪಿ.ಯು.ಸಿ.(ವಾಣಿಜ್ಯ) ಮರ್ಕಝುಲ್ ಹುದಾ ವುಮೆನ್ಸ್ ಪಿ.ಯು. ಕಾಲೇಜು, ಕುಂಬ್ರ, ಪುತ್ತೂರು ತಾಲೂಕು
ಪದವಿ/ಸ್ನಾತಕೋತ್ತರ ವಿಭಾಗ:
- ಪ್ರಥಮ – ಮೇಘ, ತೃತೀಯ ಬಿ.ಸಿ.ಎ. ಡಾ.ಪಿ. ದಯಾನಂದ ಪೈ -ಪಿ.ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು, ರಥಬೀದಿ, ಮಂಗಳೂರು
- ದ್ವಿತೀಯ–ಅಕ್ಷತಾ, ದ್ವಿತೀಯ ಬಿ.ಎ. ಸರಕಾರಿ ಪ್ರಥಮ ದರ್ಜೆ ಕಾಲೇಜು, ಸಿದ್ದಕಟ್ಟೆ, ಬಂಟ್ವಾಳ ತಾಲೂಕು
- ತೃತೀಯ – ಲಿಖಿತಾ, ಪ್ರಥಮ ಬಿ.ಕಾಂ. ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಳ್ತಂಗಡಿ ತಾಲೂಕು
ಜಿಲ್ಲಾಡಳಿತ ವತಿಯಿಂದ ಅಕ್ಟೋಬರ್ 2 ರಂದು ಮಂಗಳೂರು ಪುರಭವನ ಮುಂಭಾಗದ ರಾಜಾಜಿ ಉದ್ಯಾನವನದಲ್ಲಿ ನಡೆಯುವ ಗಾಂಧೀ ಜಯಂತಿ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದು ಜಿಲ್ಲಾ ವಾರ್ತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
