ಕಾಣಿಕೆ ಹುಂಡಿಗಳನ್ನು ಅಪವಿತ್ರಗೊಳಿಸಿದ ಹಿಂದಿನ ಷಡ್ಯಂತ್ರವನ್ನು ಪೊಲೀಸರು ಬಯಲು ಗೊಳಿಸಲಿ: ಕೆ.ಅಶ್ರಫ್

 ಕಾಣಿಕೆ ಹುಂಡಿಗಳನ್ನು ಅಪವಿತ್ರಗೊಳಿಸಿದ ಹಿಂದಿನ ಷಡ್ಯಂತ್ರವನ್ನು ಪೊಲೀಸರು ಬಯಲು ಗೊಳಿಸಲಿ: ಕೆ.ಅಶ್ರಫ್
Share this post

ಮಂಗಳೂರು, ಡಿ 29, 2021: ಕಾಣಿಕೆ ಹುಂಡಿಗಳನ್ನು ಅಪವಿತ್ರಗೊಳಿಸಿದ ಹಿಂದಿನ ಷಡ್ಯಂತ್ರವನ್ನು ಪೊಲೀಸರು ಬಯಲು ಮಾಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಒಕ್ಕೂಟ ಅಧ್ಯಕ್ಷ ಹಾಗೂ ಮಾಜಿ ಮೇಯರ್ ಕೆ ಅಶ್ರಫ್ ಒತ್ತಾಯಿಸಿದ್ದಾರೆ.

“ಇತ್ತೀಚೆಗೆ ದ.ಕ.ಜಿಲ್ಲೆಯಾದ್ಯಂತ ವಿವಿಧ ಧಾರ್ಮಿಕ ಕೇಂದ್ರಗಳ ಕಾಣಿಕೆ ಹುಂಡಿ ಗಳ ನ್ನು ಅಪವಿತ್ರ ಗೊಳಿಸಿ, ಸ್ಥಳೀಯವಾಗಿ ಮತೀಯ ಉದ್ವಿಗ್ನತೆ ಸೃಷ್ಟಿಯಾಗಿದ್ದು, ಈ ಕೃತ್ಯದಲ್ಲಿ ಆರೋಪಿಯೊಬ್ಬನನ್ನು ಪೊಲೀಸರು ಇಂದು ಬಂಧಿಸಿದ್ದು, ಪೊಲೀಸು ಆಯುಕ್ತರಿಗೆ ಈ ಬಗ್ಗೆ ಅಭಿನಂದನೆ ಸಲ್ಲಿಸುತ್ತಿದ್ದೇವೆ. ಈ ಕೃತ್ಯದ ಹಿಂದಿನ ಷಡ್ಯಂತ್ರವನ್ನು ಪೊಲೀಸರು ತನಿಖೆ ನಡೆಸಿ ಸಾರ್ವಜನಿಕರ ಮುಂದೆ ಬಹಿರಂಗ ಪಡಿಸಬೇಕು ಮತ್ತು ಕೃತ್ಯದಲ್ಲಿ ಗೂಡಾಲೋಚನೆ ವ್ಯಕ್ತಿಗಳು ಇದ್ದಲ್ಲಿ ಅವರನ್ನು ಕೂಡಾ ಶಿಕ್ಷಿಸಬೇಕು,” ಎಂದು ಅಶ್ರಫ್ ಆಗ್ರಹಿಸಿದ್ದಾರೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!