ಧಾರವಾಡದಲ್ಲಿ ಉಜಿರೆ ಉಪನ್ಯಾಸಕರಿಗೆ ಸನ್ಮಾನ

 ಧಾರವಾಡದಲ್ಲಿ ಉಜಿರೆ ಉಪನ್ಯಾಸಕರಿಗೆ ಸನ್ಮಾನ
Share this post

ಧಾರವಾಡ ಜುಲೈ 22, 2024: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋಧ್ಯಮ ವಿಭಾಗದ ಇತ್ತೀಚಿಗೆ ನಡೆದ 40ನೇ ವರ್ಷದ ಸಂಭ್ರಮಾಚಾರಣೆಯ ಸಂದರ್ಭದಲ್ಲಿ ಉಜಿರೆಯ ಶ್ರೀ. ಧ. ಮ. ಕಾಲೇಜಿನ ಪತ್ರಿಕೋಧ್ಯಮ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ್ ಹೆಗಡೆ ಅವರನ್ನ ಸನ್ಮಾನಿಸಲಾಯಿತು.

ವಿಭಾಗವು ತನ್ನ 40ನೇ ವರ್ಷದ ಪ್ರಯುಕ್ತ ವಿಭಾಗದ ಸಾಧಕ 40 ವಿದ್ಯಾರ್ಥಿಗಳನ್ನು ಗುರುತಿಸುವ ಹಾಗೂ ಗೌರವಿಸುವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ವಿವಿಧ ರಂಗದಲ್ಲಿ ಅನುಪಮ ಹಾಗೂ ಅನನ್ಯ ಸೇವಾನಿರತವನ್ನು 40 ವಿದ್ಯಾರ್ಥಿಗಳನ್ನ ಇದರಡಿ ಆಯ್ಕೆ ಮಾಡಲಾಗಿತ್ತು.

ರಾಷ್ಟ್ರ ಮಟ್ಟದ ಎರಡು ದಿನದ ವಿಚಾರ ಸಂಕಿರಣ, ಮಾಧ್ಯಮ ಸ್ಪರ್ಧೆ ಕೂಡಾ ಇದೇ ಕಾರ್ಯಕ್ರಮದಲ್ಲಿ ನಡೆಯಿತು. ಜು. 8 ಹಾಗೂ 4 ರಂದು ಕಾರ್ಯಕ್ರಮ ಏರ್ಪಡಾಗಿತ್ತು.

ವಿಭಾಗದ ಬಹುಸಂಖ್ಯೆಯ ಹಿಂದಿನ ವಿದ್ಯಾರ್ಥಿಗಳು, ಪತ್ರಕರ್ತರು, ವಿವಿಧ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿಭಾಗದ ಹಳೇ ವಿದ್ಯಾರ್ಥಿಗಳ ಸಮಾವೇಶ ಕೂಡಾ ನಡೆಯಿತು.

40 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಈ ವಿಭಾಗದಿಂದ ಸಾವಿರಾರು ವಿದ್ಯಾರ್ಥಿಗಳು ಅಧ್ಯಯನ ಪೂರೈಸಿ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!