ಆಟಿಕೂಟದಲ್ಲಿ ಬಗೆ ಬಗೆಯ ಖಾದ್ಯ ಸವಿದ ನಾಗರೀಕರು

 ಆಟಿಕೂಟದಲ್ಲಿ ಬಗೆ ಬಗೆಯ ಖಾದ್ಯ ಸವಿದ ನಾಗರೀಕರು
Share this post

ಮಂಗಳೂರು,ಆ.13, 2022: ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಗುತ್ತು ಮನೆಯಲ್ಲಿ ಶನಿವಾರ ನುರಿತ ಕಲಾವಿದ ತಂಡಗಳ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ, ಪಾರಂಪರಿಕ ಕ್ರೀಡಾಕೂಟದೊಂದಿಗೆ ಆಟಿಕೂಟವನ್ನು ಹಮ್ಮಿಕೊಳ್ಳಲಾಯಿತು.

ಇದರೊಂದಿಗೆ ತುಳು ನಾಡಿನ ವೈವಿಧ್ಯಮಯ ಖಾದ್ಯಗಳನ್ನು ಆಗಮಿಸಿದ ನೂರಾರು ಸಂಖ್ಯೆಯ ನಾಗರೀಕರಿಗೆ ಉಣಬಡಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಸಕರಾದ ಉಮಾನಾಥ್ ಕೋಟ್ಯಾನ್, ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಶ್ರೀ, ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ವೆಂಕಟೇಶ್, ಸದಸ್ಯರಾದ ಉಮೇಶ್ ಶೆಟ್ಟಿ, ಹರೀಶ್, ಕೆ.ಕೆ.ಪೇಜಾವರ ಸೇರಿದಂತೆ ಅಧಿಕಾರಿಗಳು, ಕಲಾವಿದರು ಹಾಗೂ ನೂರಾರು ನಾಗರೀಕರು ಭಾಗವಹಿಸಿದ್ದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!