ಜೂ 28 ರಂದು ದಾಂಡೇಲಿಯಲ್ಲಿ ಉದ್ಯಮಶೀಲತಾ ಜಾಗೃತಿ ಶಿಬಿರ

 ಜೂ 28 ರಂದು ದಾಂಡೇಲಿಯಲ್ಲಿ ಉದ್ಯಮಶೀಲತಾ ಜಾಗೃತಿ ಶಿಬಿರ
Share this post

ಕಾರವಾರ, ಜೂ 23, 2022: ರಾಜ್ಯ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಇವರ ಪ್ರಾಯೋಜಕತ್ವದಲ್ಲಿ, ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ(ಸಿಡಾಕ್), ಧಾರವಾಡ, ಸಿಡಾಕ್, ಕಾರವಾರ ಹಾಗೂ ಸಾಪ್ಟೆಕ್ ಕಂಪ್ಯೂಟರ್ಸ, ದಾಂಡೇಲಿ ಇವರ ಸಂಯುಕ್ತ ಆಶ್ರಯದಲ್ಲಿ  ಜೂ 28 ಬೆಳಿಗ್ಗೆ 10.30 ಗಂಟೆಗೆ ದಾಂಡೇಲಿ ಕರ್ನಾಟಕ ಭವನದಲ್ಲಿ  ಒಂದು ದಿನದ ಉದ್ಯಮಶೀಲತಾ ಜಾಗೃತಿ ಶಿಬಿರ ಆಯೋಜಿಸಲಾಗಿದೆ.

ಆಸಕ್ತ 18 ರಿಂದ 40 ವರ್ಷದೋಳಗಿನ ಹಾಗೂ ಕನಿಷ್ಠ ಓದುವದಕ್ಕೆ ಹಾಗೂ ಬರೆಯುವದಕ್ಕೆ ಬರುವವರು ಶಿಬಿರಕ್ಕೆ ಹಾಜರಾಗಬಹುದು. ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಉದ್ಯಮಶೀಲರ ಸಾಮಥ್ರ್ಯಗಳು, ಉದ್ಯಮ ಸ್ಥಾಪಿಸುವದಕ್ಕೆ ಲಭ್ಯವಿರುವ ಸರ್ಕಾರದ ಯೋಜನೆಗಳು, ಉದ್ಯಮ ಸ್ಥಾಪಿಸಲು ಸಹಾಯ ಮತ್ತು ಸೌಲಭ್ಯಗಳನ್ನು ಒದಗಿಸುತ್ತಿರುವ ಸಂಸ್ಥೆಗಳ ಪಾತ್ರ, ಯಶಸ್ವಿ ಉದ್ಯಮಶೀಲರ ಅನುಭವ ಮುಂತಾದ ವಿಷಯಗಳನ್ನು ತಿಳಿಸಲಾಗುವದು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದವರಿಗೆ ಆದ್ಯತೆ ನೀಡಲಾಗುವುದು.

ಹೆಚ್ಚಿನ ಮಾಹಿಗಾಗಿ  ಕಾರವಾರ ಉಪ ನಿರ್ದೇಶಕ ಸಿಡಾಕ್, ದೂರವಾಣಿ ಸಂಖ್ಯೆ 9448812974 ಶಿವಾನಂದ ವೆಂ. ಎಲಿಗಾರ, ಶಿವರಾಜ ಹೆಳವಿ, ತರಬೇತುದಾರರು ಸಿಡಾಕ್ ದೂರವಾಣಿ  ಸಂಖ್ಯೆ :8722708795 ಗೆ ಸಂಪರ್ಕಿಸಿ ಎಂದು ಕರ್ನಾಟಕ ಉದ್ಯಮಶೀಲಾತಾಭಿವೃದ್ಧಿ ಕೇಂದ್ರದ ಉಪ ನೀರ್ದೇಶಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!