ಕಾರವಾರ: ಜೂ. 28 ರಂದು ಪಿಂಚಣಿ ಅದಾಲತ್

 ಕಾರವಾರ: ಜೂ. 28 ರಂದು ಪಿಂಚಣಿ ಅದಾಲತ್
Share this post

ಕಾರವಾರ ಜೂ. 4, 2022: ಕಾರವಾರ ವಿಭಾಗೀಯ ಅಂಚೆ ಪಿಂಚಣಿ ಅದಾಲತ್ ಜೂ. 28 ರ ಬೆಳಿಗ್ಗೆ 11 ಗಂಟೆಗೆ ಕಾರವಾರ ಅಂಚೆ ಅಧೀಕ್ಷಕರ ಕಾರ್ಯಾಲಯದಲ್ಲಿ ನಡೆಯಲಿದೆ.

ಕಾರವಾರ ವಿಭಾಗದಲ್ಲಿ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿರುವ ಪಿಂಚಣಿದಾರರು ಮಾತ್ರ ಅದಾಲತ್‍ನಲ್ಲಿ ಪಾಲ್ಗೊಳ್ಳಬಹುದಾಗಿದೆ. ಗ್ರಾಮೀಣ ಅಂಚೆ ಸೇವಕರಿಗಾಗಲಿ ಅಥವಾ ಅಂಚೆ ಇಲಾಖೆಯ ಮೂಲಕ ಪಿಂಚಣಿ, ಪಡೆಯುತ್ತಿರುವ ಇತರೆ ನೌಕರರಿಗೆ ಅವಕಾಶವಿರುವುದಿಲ್ಲ. ಪಾಲ್ಗೊಳ್ಳುವ ಅಂಚೆ ಪಿಂಚಣಿದಾರರಿಗೆ ಯಾವುದೇ ಭತ್ಯೆ ಕೊಡಲಾಗುವುದಿಲ್ಲ.

ಅಂಚೆ ಪಿಂಚಣಿದಾರರು ತಮ್ಮ ಸಮಸ್ಯೆಗಳನ್ನು ಲಿಖಿತವಾಗಿ ತಮ್ಮ ಎಲ್ಲಾ ವಿವರ, ವಿಳಾಸ, ಪಿಪಿಒ ನಂಬರ್ ಮತ್ತು ಪಿಂಚಣಿ ಪಡೆದುಕೊಳ್ಳುತ್ತಿರುವ ಅಂಚೆ ಕಚೇರಿ ಇತ್ಯಾದಿ ವಿವರಗಳೊಂದಿಗೆ ಜೂ. 24 ರೊಳಗೆ ಅಂಚೆ ಅಥವಾ ಇಮೇಲ್ [email protected] ಗೆ ಅರ್ಜಿ ಕಳುಹಿಸಬಹುದು ಎಂದು ಕಾರವಾರ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!