ಸಾವಯವ ಸಿರಿ ಯೋಜನೆ:ಅರ್ಜಿ ಆಹ್ವಾನ

 ಸಾವಯವ ಸಿರಿ ಯೋಜನೆ:ಅರ್ಜಿ ಆಹ್ವಾನ
Share this post

ಮಂಗಳೂರು,ಮಾ.24, 2022: ಸಾವಯವ ಕೃಷಿ ಉತ್ತೇಜನಗೊಳಿಸಲು 2021-22ನೇ ಸಾಲಿನ ಸಾವಯವ ಸಿರಿ ಯೋಜನೆ ಜಾರಿಗೆ ಬಂದಿದ್ದು ಕೃಷಿಯಲ್ಲಿ ತೊಡಗಿರುವ ಹಾಗೂ 10 ವರ್ಷಗಳ ಅನುಭವವುಳ್ಳ ಸ್ಥಳೀಯ ಸಾವಯವ ಕೃಷಿಕರ ಸಂಘ, ಸಂಸ್ಥೆ, ಒಕ್ಕೂಟ ಹಾಗೂ ಗುಂಪುಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ನಿಗದಿತ ನಮೂನೆಯ ಅರ್ಜಿಯನ್ನು ಮಂಗಳೂರಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಪಡೆಯಬಹುದು. ಅರ್ಹತಾ ಅಂಶಗಳಿಗೆ ಸಂಬಂಧಿಸಿದ ದಾಖಲಾತಿಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ ಮಾ.29ರ ಸಂಜೆ 4 ಗಂಟೆಯೊಳಗೆ ಮಂಗಳೂರಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಲ್ಲಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!