ನೂತನ ಬ್ರಹ್ಮರಥ ವೀಕ್ಷಿಸಿದ ಕಾಶೀ ಮಠಾಧೀಶರು

 ನೂತನ ಬ್ರಹ್ಮರಥ ವೀಕ್ಷಿಸಿದ ಕಾಶೀ ಮಠಾಧೀಶರು
Share this post

ಮಂಗಳೂರು ಜ 19, 2022: ಇತಿಹಾಸ ಪ್ರಸಿದ್ಧ ಮಂಗಳೂರು ರಥೋತ್ಸವ, ಶ್ರೀ ವೆಂಕಟರಮಣ ದೇವಸ್ಥಾನದ ಪುನಃ ಪ್ರತಿಷ್ಠಾ ದಶಮಾನೋತ್ಸವ ಮತ್ತು ಶ್ರೀ ದೇವರ ನೂತನವಾಗಿ ನಿರ್ಮಾಣಗೊಂಡ ಬ್ರಹ್ಮರಥ ಸಮರ್ಪಣಾ ಕಾರ್ಯಕ್ರಮ ಪ್ರಯುಕ್ತ ಶ್ರೀ ಸಂಸ್ಥಾನ ಕಾಶೀ ಮಠಾಧಿಪತಿಗಳಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರು ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಳಕ್ಕೆ ಇಂದು ಬೆಳಿಗ್ಗೆ ಆಗಮಿಸಿದರು.

ಶ್ರೀಗಳವರಿಗೆ ಸಮಾಜಭಾಂದವರಿಂದ ಭವ್ಯ ಪೂರ್ಣ ಕುಂಭ ಸ್ವಾಗತ ನೀಡಲಾಯಿತು. ಶ್ರೀ ದೇವರ ದರ್ಶನ ಬಳಿಕ ಸಂಸ್ಥಾನದ ದೇವರ ನೈರ್ಮಲ್ಯ ವಿಸರ್ಜನಾ ಪೂಜೆ ನಡೆಸಿ ಶ್ರೀ ಕಾಶೀ ಮಠ ಸಂಸ್ಥಾನದಿಂದ ಸಮರ್ಪಣೆಗೊಳ್ಳಲಿರುವ ನೂತನ ಬ್ರಹ್ಮರಥದಲ್ಲಿ ಇರಿಸಲಿರುವ ಶ್ರೀಗಂಧ ಹಾಗೂ ರಕ್ತ ಚಂದನದಿಂದ ತಯಾರಿಸಲ್ಪಟ್ಟ ಶ್ರೀ ದೇವರ ಪೀಠ ಮತ್ತು ನೂತನ ರಥದ ವನ್ನು ಶ್ರೀಗಳವರು ವೀಕ್ಷಿಸಿ ಪ್ರಶಂಶಿಸಿದರು.

ಈ ಸಂದರ್ಭದಲ್ಲಿ ಶ್ರೀ ದೇವಳದ ಮೊಕ್ತೇಸರರಾದ ಸಿ ಎಲ್ . ಶೆಣೈ , ಕೆ . ಪಿ . ಪ್ರಶಾಂತ್ ರಾವ್ , ರಾಮಚಂದ್ರ ಕಾಮತ್ , ಮುಂಡ್ಕುರ್ ರಾಮದಾಸ್ ಕಾಮತ್ , ತಂತ್ರಿಗಳಾದ ಪಂಡಿತ್ ನರಸಿಂಹ ಆಚಾರ್ಯ , ಲೆಕ್ಕ ಪರಿಶೋಧಕ ಎಂ . ಜಗನ್ನಾಥ್ ಕಾಮತ್, ವೆಂಕಟೇಶ್ ಪೈ ಹಾಗೂ ನೂರಾರು ಭಜಕರು ಉಪಸ್ಥಿತರಿದ್ದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!