ಶ್ರೀ ಕೃಷ್ಣಾಪುರ ಪರ್ಯಾಯ: ಕಟೀಲು, ಮಂಗಳೂರು, ಮಟ್ಟು ಭಕ್ತರಿಂದ ಹೊರೆಕಾಣಿಕೆ

 ಶ್ರೀ ಕೃಷ್ಣಾಪುರ ಪರ್ಯಾಯ: ಕಟೀಲು, ಮಂಗಳೂರು, ಮಟ್ಟು ಭಕ್ತರಿಂದ ಹೊರೆಕಾಣಿಕೆ
Share this post

ಉಡುಪಿ, ಜ 17, 2022: ಶ್ರೀಕೃಷ್ಣಾಪುರ ಮಠದ ಪರ್ಯಾಯೋತ್ಸವಕ್ಕೆ,ಕಟೀಲು, ಮಂಗಳೂರು, ಮುಲ್ಕಿ, ಮೂಡುಬಿದ್ರಿ ಪರಿಸರದ, ಮತ್ತು ಮಟ್ಟು ಲಕ್ಷ್ಮೀನಾರಾಯಣ ರಾವ್ ಮತ್ತು ಸಹೋದರರು, ಉಡುಪಿ ಬೈಲೂರು, ಗುಂಡಿಬೈಲು, ಚಿಟ್ಪಾಡಿ, ಹಾಲುಮತ ಮಹಾಸಭಾ, ಕಾರ್ಕಳ ಇಲ್ಲಿಯ ಭಕ್ತಾಭಿಮಾನಿಗಳು ಹೊರೆಕಾಣಿಕೆಯನ್ನು ಸಮರ್ಪಿಸಿದರು.

ಈ ಸಂದರ್ಭದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶೀಯ ಮೊಕ್ತೇಸರರು ಹಾಗೂ ಅರ್ಚಕರಾದ ಶ್ರೀ ವಾಸುದೇವ ಅಸ್ರಣ್ಣ, ಲಕ್ಷ್ಮೀನಾರಾಯಣ ಅಸ್ರಣ್ಣ, ವೆಂಕಟರಮಣ ಅಸ್ರಣ್ಣ, ಅನಂತಪದ್ಮನಾಭ ಅಸ್ರಣ್ಣ, ಕಮಲಾದೇವಿ ಪ್ರಸಾದ ಅಸ್ರಣ್ಣ , ಶ್ರೀಹರಿನಾರಾಯಣದಾಸ ಅಸ್ರಣ್ಣ, ಮಂಗಳೂರಿನ ಪ್ರದೀಪ್ ಕಲ್ಕೂರ್, ಹರಿಕೃಷ್ಣ ಪುನರೂರು, ಮೂಡಬಿದಿರೆಯ ಶ್ರೀಪತಿ ಭಟ್ ಮೊದಲಾದವರು ಉಪಸ್ಥಿತರಿದ್ದರು.

ಪರ್ಯಾಯೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರ್,ಜೊತೆಕಾರ್ಯದರ್ಶಿ ರಾಜಗೋಪಾಲ ಭಟ್,ಪ್ರವೀಣ ಉಪಾಧ್ಯಾಯ,ಪೆರಂಪಳ್ಳಿ ವಾಸುದೇವಭಟ್ ,ಈಶ್ವರ ಚಿಟ್ಪಾಡಿ ಮೊದಲಾದವರ ಉಪಸ್ಥಿತಿಯಲ್ಲಿ ಹೊರೆಕಾಣಿಕೆ ಸಮಿತಿಯ ಸಂಚಾಲಕರಾದ ಸುಪ್ರಸಾದ್ ಶೆಟ್ಟಿ ಮೆರವಣಿಗೆಯ ವ್ಯವಸ್ಥೆಯನ್ನು ಮಾಡಿದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!