ಜ್ಯೋತಿ ತಳಿ ಭತ್ತ ಖರೀದಿ: ಅವಧಿ ವಿಸ್ತರಣೆ
![ಜ್ಯೋತಿ ತಳಿ ಭತ್ತ ಖರೀದಿ: ಅವಧಿ ವಿಸ್ತರಣೆ](https://thecanarapost.com/wp-content/uploads/2020/11/WhatsApp-Image-2020-11-09-at-7.22.21-PM.jpeg)
ಉಡುಪಿ, ಮಾರ್ಚ್, 26, 2021: ಪ್ರಸಕ್ತ ಸಾಲಿನಲ್ಲಿ ರೈತರಿಂದ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಸರ್ಕಾರದ ಆದೇಶದಂತೆ ಮಾರ್ಚ್ 22 ಮತ್ತು 24 ರಂದು ಜ್ಯೋತಿ ತಳಿಯ ಭತ್ತವನ್ನು ಸಾಮಾನ್ಯ ಭತ್ತದ ದರದಲ್ಲಿ ಪ್ರತಿ ಕ್ವಿಂಟಾಲ್ಗೆ 1868 ರೂ. ದರದಲ್ಲಿ ಖರೀದಿಸಲು ಮಂಜೂರಾತಿ ನೀಡಲಾಗಿದ್ದು, ರೈತರಿಂದ ಭತ್ತ ಖರೀದಿಗೆ ಸಂಬಂಧಿಸಿದಂತೆ ನೋಂದಣಿ ಹಾಗೂ ಖರೀದಿ ಅವಧಿಯನ್ನು ಮಾರ್ಚ್ 31 ರ ವರೆಗೆ ವಿಸ್ತರಿಸಲಾಗಿದೆ.
ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.