ಶ್ರೀಕೃಷ್ಣ ಮಠದಲ್ಲಿ ಹೃಷೀಕೇಶತೀರ್ಥರ ಆರಾಧನೆ
![ಶ್ರೀಕೃಷ್ಣ ಮಠದಲ್ಲಿ ಹೃಷೀಕೇಶತೀರ್ಥರ ಆರಾಧನೆ](https://thecanarapost.com/wp-content/uploads/2021/02/SGR_4691-850x560.jpg)
![](https://thecanarapost.com/wp-content/uploads/2021/02/SGR_4691-scaled.jpg)
ಉಡುಪಿ ಫೆ 19, 2021: ಶ್ರೀಕೃಷ್ಣ ಮಠದಲ್ಲಿ, ರಥಸಪ್ತಮೀ ಮತ್ತು ಪಲಿಮಾರು ಮಠದ ಮೂಲಯತಿಗಳಾದ ಹೃಷೀಕೇಶತೀರ್ಥರ ಆರಾಧನೆಯ ಪ್ರಯುಕ್ತ, ರಥಬೀದಿಯಲ್ಲಿ ಸುವರ್ಣ ರಥದಲ್ಲಿ ಸರ್ವಮೂಲಗ್ರಂಥಗಳ ಮೆರವಣಿಗೆ ನಡೆಯಿತು.
![](https://thecanarapost.com/wp-content/uploads/2021/02/SGR_4677-scaled.jpg)
ಪರ್ಯಾಯ ಪೀಠಾಧೀಶರಾದ ಅದಮಾರು ಶ್ರೀಈಶಪ್ರಿಯತೀರ್ಥ ಶ್ರೀಪಾದರು,ಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು,ಪೇಜಾವರ ಮಠಾಧೀಶರಾದ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಭಾಗವಹಿಸಿದ್ದರು.
ಶ್ರೀಕೃಷ್ಣ ದೇವರ ಮುಂಭಾಗದಲ್ಲಿ ಚಂದ್ರಶಾಲೆಯಲ್ಲಿ ಶ್ರೀಪಾದರುಗಳು ಅನುಗ್ರಹ ಸಂದೇಶವನ್ನಿತ್ತರು.