ವೈಭವದ ಕೊಡಿಯಾಲ್ ತೇರ್
![ವೈಭವದ ಕೊಡಿಯಾಲ್ ತೇರ್](https://thecanarapost.com/wp-content/uploads/2021/02/IMG_0225-850x560.jpg)
![](https://thecanarapost.com/wp-content/uploads/2021/02/IMG_0225.jpg)
ಮಂಗಳೂರು, ಫೆ 19, 2021 : ಶ್ರೀ ವೆಂಕಟರಮಣ ದೇವಸ್ಥಾನದ 200 ನೇ ವರ್ಷದ ಮಂಗಳೂರು ರಥೋತ್ಸವ ಇಂದು ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ಜರಗಿತು.
![](https://thecanarapost.com/wp-content/uploads/2021/02/IMG_0286.jpg)
ರಥ ಸಪ್ತಮಿಯ ದಿನದಂದು ಬೆಳಿಗ್ಗೆ ಶ್ರೀ ದೇವರ ಸನ್ನಿಧಾನದಲ್ಲಿ ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ ಮಹಾ ಪ್ರಾರ್ಥನೆ ನಡೆದು ಬಳಿಕ ಪಂಚಾಮೃತ ಅಭಿಷೇಕ ನಡೆಯಿತು. ನಂತರ ಶ್ರೀಗಳವರಿಂದ ಶ್ರೀ ವೀರ ವೆಂಕಟೇಶ ದೇವರಿಗೆ ಶತ ಕಲಶಾಭಿಷೇಕ , ಗಂಗಾಭಿಷೇಕ ನಂತರ ಮಹಾ ಮಂಗಳಾರತಿ ಜರಗಿತು.
![](https://thecanarapost.com/wp-content/uploads/2021/02/IMG_0215.jpg)
ಯಜ್ಞ ಮಂಟಪದಲ್ಲಿ ಮಹಾ ಯಜ್ಞದ ಪೂರ್ಣಾಹುತಿ ಬಳಿಕ ಸರ್ವಾಲಂಕಾರ ಭೂಷಿತ ಶ್ರೀ ವೀರ ವೆಂಕಟೇಶ ಹಾಗೂ ಶ್ರೀನಿವಾಸ ದೇವರು ಪುಷ್ಪಾಲಂಕೃತ ಸ್ವರ್ಣ ಪಲ್ಲಕಿಯಲ್ಲಿ ವಿರಾಜಮಾನರಾಗಿ ಭವ್ಯ ಬ್ರಹ್ಮ ರಥದಲ್ಲಿ ರಥಾರೂಢರಾಗಿ ನೆರೆದ ಸಾವಿರಾರು ಭಜಕರ ಸಮ್ಮುಖದಲ್ಲಿ ಮಂಗಳೂರು ರಥೋತ್ಸವ ಸಮಾಪನ ಗೊಂಡಿತು.
![](https://thecanarapost.com/wp-content/uploads/2021/02/WhatsApp-Image-2021-02-19-at-7.20.05-PM.jpeg)
![](https://thecanarapost.com/wp-content/uploads/2021/02/IMG_0165.jpg)
ಚಿತ್ರ : ಮಂಜು ನೀರೇಶ್ವಾಲ್ಯ