ತರಬೇತಿಯಿಂದ ವ್ಯಕ್ತಿತ್ವ ವಿಕಸನ: ಹರೀಶ್ ಪೂಂಜ

 ತರಬೇತಿಯಿಂದ ವ್ಯಕ್ತಿತ್ವ ವಿಕಸನ: ಹರೀಶ್ ಪೂಂಜ
Share this post

ಬೆಳ್ತಂಗಡಿ, ಫೆ 18, 2021: ಉತ್ತಮ ತರಬೇತಿಯಿಂದ ವ್ಯಕ್ತಿತ್ವ ವಿಕಸನದೊಂದಿಗೆ ಕಾರ್ಯದಕ್ಷತೆ, ಸಾಮಾಜಿಕ ಬದ್ಧತೆ ಹಾಗೂ ಸೇವಾಕಳಕಳಿ ಹೆಚ್ಚಾಗುತ್ತದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಅವರು ಉಜಿರೆಯಲ್ಲಿರುವ ರುಡ್‍ಸೆಟ್ ಸಂಸ್ಥೆಯಲ್ಲಿ ಗೃಹ ಉಪಯೋಗಿ ವಿದ್ಯುತ್ ಉಪಕರಣಗಳ ದುರಸ್ತಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಸಂಸ್ಥೆಯ ನಿರ್ದೇಶಕ ಪಿ. ಹಿರೇಮಠ್ ಸ್ವಾಗತಿಸಿದರು. ಉಪನ್ಯಾಸಕಿ ಅನಸೂಯ ಧನ್ಯವಾದವಿತ್ತರು.
ಒಂದು ತಿಂಗಳ ಕಾಲ ನಡೆದ ಉಚಿತ ತರಬೇತಿಯಲ್ಲಿ 29 ಶಿಬಿರಾರ್ಥಿಗಳು ಭಾಗವಹಿಸಿದರು.

Subscribe to our newsletter!

Other related posts

error: Content is protected !!