ಬೆಂಗಳೂರಿನ ತಹಶೀಲ್ದಾರ್ ನಿಯೋಗದಿಂದ ವೀರೇಂದ್ರ ಹೆಗ್ಗಡೆಯವರಿಗೆ ಅಭಿನಂದನೆ

 ಬೆಂಗಳೂರಿನ ತಹಶೀಲ್ದಾರ್ ನಿಯೋಗದಿಂದ   ವೀರೇಂದ್ರ ಹೆಗ್ಗಡೆಯವರಿಗೆ ಅಭಿನಂದನೆ

ಬೆಂಗಳೂರಿನ ತಹಶೀಲ್ದಾರ್ ನಿಯೋಗದಿಂದ ಡಿ ವೀರೇಂದ್ರ ಹೆಗ್ಗಡೆಯವರಿಗೆ ಅಭಿನಂದನೆ

Share this post
Bengaluru Tahsildar felicitates Dharmasthala Dharmadhikari Dr Veerendra Heggade
ಬೆಂಗಳೂರಿನ ತಹಶೀಲ್ದಾರ್ ನಿಯೋಗದಿಂದ ಡಿ ವೀರೇಂದ್ರ ಹೆಗ್ಗಡೆಯವರಿಗೆ ಅಭಿನಂದನೆ

ಧರ್ಮಸ್ಥಳ, ಫೆ 03, 2021: ಬೆಂಗಳೂರು ಗ್ರಾಮಾಂತರ ತಹಶೀಲ್ದಾರ್ ನಿಯೋಗ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಧರ್ಮಸ್ಥಳದಲ್ಲಿ ಭೇಟಿಯಾಗಿ ಅಭಿನಂದನೆ ಸಲ್ಲಿಸಿತು.

ಬೆಂಗಳೂರು ಗ್ರಾಮಾಂತರದ ಕೃಷಿಕರಿಗೆ ನೀರಾವರಿಗೆ ಅನುಕೂಲವಾಗುವಂತೆ “ನಮ್ಮೂರು, ನಮ್ಮ ಕೆರೆ” ಯೋಜನೆಯಲ್ಲಿ ಕೆರೆ ಅಭಿವೃದ್ಧಿ ಕಾರ್ಯಕ್ರಮ, ಎಸ್.ಡಿ.ಎಂ. ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಹಾಗೂ ನೆಲಮಂಗಲದಲ್ಲಿ ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಮೂಲಕ ಜನರ ಆರೋಗ್ಯ ರಕ್ಷಣೆಗೆ ಕಾಯಕಲ್ಪ ಮೊದಲಾದ ಸೇವಾಕಾರ್ಯಗಳಿಗೆ ಹೆಗ್ಗಡೆಯವರನ್ನು ಅಭಿನಂದಿಸಿದರು.

ದೊಡ್ಡಬಳ್ಳಾಪುರ ತಹಶೀಲ್ದಾರ್ ವಿಜಯಕುಮಾರ್, ಬಿ.ಡಿ.ಎ. ತಹಶೀಲ್ದಾರ್ ಬಾಲಕೃಷ್ಣ, ದೇವನಹಳ್ಳಿ ತಹಶೀಲ್ದಾರ್ ಗಂಗಾಧರ್, ಬೆಂಗಳೂರು ನಗರ ತಹಶೀಲ್ದಾರ್ ಗಿರೀಶ್ ಮೊದಲಾದವರು ನಿಯೋಗದಲ್ಲಿದ್ದರು.

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ವಿ. ರಾಮಸ್ವಾಮಿ, ಮತ್ತು ಪ್ರಾದೇಶಿಕ ನಿರ್ದೇಶಕ ವಿವೇಕ್ ಪಾೈಸ್ ಉಪಸ್ಥಿತರಿದ್ದರು.

Subscribe to our newsletter!

Other related posts

error: Content is protected !!