ಹಾವು ಕಡಿತ: 11 ವರ್ಷದ ಬಾಲಕಿ ಸಾವು

 ಹಾವು ಕಡಿತ: 11 ವರ್ಷದ ಬಾಲಕಿ ಸಾವು
Share this post

ಉಡುಪಿ, ನ 21: ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಹಾವು ಕಡಿತದಿಂದ 11 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ.

ನವಂಬರ್ 20 ರಂದು ಕುಂದಾಪುರ ತಾಲೂಕಿನ ಯಡಮೊಗ್ಗೆ ಗ್ರಾಮದ ವಾಟಾರ ಹಾಡಿ ಎಂಬಲ್ಲಿ ಕು. ಪ್ರಥ್ವಿ (11) ತನ್ನ ತಾಯಿ ಶ್ರೀಮತಿ ಸುಮತಿ ಜೊತೆ ಮನೆಯ ಹತ್ತಿರದ ತೋಟಕ್ಕೆ ಹೋದಾಗ ಅಲ್ಲಿ ಯಾವುದೋ ವಿಷ ಪೂರಿತ ಹಾವು ಕಚ್ಚಿತು.

ಮಗುವನ್ನು ಕೂಡಲೆ ಕುಂದಾಪುರ ಸರಕಾರಿ ಅಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆಎಮ್ ಸಿ ಆಸ್ಪತ್ರೆಗೆ ಹೋಗಿದ್ದು ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಂಜೆ 5.15 ಕ್ಕೆ ಅಸ್ಪತ್ರೆಯಲ್ಲಿ ಮಗು ಮೃತಪಟ್ಟಿದೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿದೆ.

Subscribe to our newsletter!

Other related posts

error: Content is protected !!