ಶ್ರೀಕೃಷ್ಣ ಮಠದಲ್ಲಿ ಕದಿರು ಕಟ್ಟುವ ಹಬ್ಬ
![ಶ್ರೀಕೃಷ್ಣ ಮಠದಲ್ಲಿ ಕದಿರು ಕಟ್ಟುವ ಹಬ್ಬ](https://thecanarapost.com/wp-content/uploads/2020/10/SGR_1494-850x560.jpg)
ಉಡುಪಿ ಅ 26: ಸಂಪ್ರದಾಯದಂತೆ ವಿಜಯದಶಮಿ ದಿನವಾದ ಇಂದು ಶ್ರೀಕೃಷ್ಣ ಮಠದಲ್ಲಿ ಕದಿರು ಕಟ್ಟುವ ಹಬ್ಬ ನಡೆಯಿತು.
ಶ್ರೀಸೋದೆ ಮಠದಲ್ಲಿ ಕದಿರನ್ನು ಪೂಜಿಸಿ ಮೆರವಣಿಗೆಯಲ್ಲಿ ಶ್ರೀಕೃಷ್ಣನ ಗರ್ಭಗುಡಿಯ ಪೂರ್ವದ್ವಾರದಲ್ಲಿ ಒಳತಂದು ಪರ್ಯಾಯ ಅದಮಾರು ಶ್ರೀಈಶಪ್ರಿಯತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ, ಪರ್ಯಾಯ ಮಠದ ಪಾರುಪತ್ಯಗಾರರಾದ ಲಕ್ಷ್ಮೀಶ ಆಚಾರ್ಯರ ನೇತೃತ್ವದಲ್ಲಿ ಪೂಜೆ ನೆರವೇರಿತು.
ಬಡಗುಮಾಳಿಗೆಯಲ್ಲಿ ಪೂಜೆಯ ನಂತರ ಅಲ್ಲಿ ನೆರೆದಿದ್ದ ಭಕ್ತರಿಗೆ ಕದಿರನ್ನು ವಿತರಿಸಲಾಯಿತು.
![](https://thecanarapost.com/wp-content/uploads/2020/10/SGR_1427-scaled.jpg)
![](https://thecanarapost.com/wp-content/uploads/2020/10/SGR_1395-1920x1200.jpg)
![](https://thecanarapost.com/wp-content/uploads/2020/10/SGR_1519-1920x1200.jpg)