ಶ್ರೀ ಕೃಷ್ಣ ಮಠದ ಕಾಷ್ಠಶಿಲ್ಪ ವೀಕ್ಷಿಸಿದ ಕೃಷ್ಣಾಪುರ, ಸೋದೆ ಮಠಾಧೀಶರು

 ಶ್ರೀ ಕೃಷ್ಣ ಮಠದ ಕಾಷ್ಠಶಿಲ್ಪ ವೀಕ್ಷಿಸಿದ ಕೃಷ್ಣಾಪುರ, ಸೋದೆ ಮಠಾಧೀಶರು
Share this post

ಉಡುಪಿ, ಸೆ 29: ಶ್ರೀಕೃಷ್ಣ ಮಠದಲ್ಲಿ,  ಪರ್ಯಾಯ ಅದಮಾರು ಶ್ರೀಈಶಪ್ರಿಯತೀರ್ಥರ ಆಶಯದಂತೆ ಕಾಷ್ಠಶಿಲ್ಪ ಹಾಗೂ ಪ್ರಾಚೀನ ಪಾರಂಪರಿಕ ರೀತಿಯಲ್ಲಿ ನಿರ್ಮಾಣಗೊಂಡ  ದೇವರ ದರ್ಶನಕ್ಕೆ ಬರುವ ವಿಶೇಷ ದಾರಿಯನ್ನು,  ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರ ತೀರ್ಥ ಶ್ರೀಪಾದರು ಹಾಗೂ ಸೋದೆ ಮಠಾಧೀಶರಾದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು  ಆಗಮಿಸಿ ಅವಲೋಕಿಸಿ  ಹರ್ಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಇಂಜಿನಿಯರ್ ರಾಘವೇಂದ್ರ ರಾವ್,ಪರ್ಯಾಯ ಮಠದ ದಿವಾನರಾದ ಲಕ್ಷ್ಮೀನಾರಾಯಣ ಮುಚ್ಚಿನ್ತಯ,ಪರ್ಯಾಯ ಮಠದ ವ್ಯವಸ್ಥಾಪಕರಾದ ಗೋವಿಂದರಾಜ್, ಶೀಕೃಷ್ಣ ಸೇವಾ ಬಳಗದ ವೈ.ಎನ್.ರಾಮಚಂದ್ರ ರಾವ್ ಮೊದಲಾದವರು ಉಪಸ್ಥಿತರಿದ್ದರು.  

Subscribe to our newsletter!

Other related posts

error: Content is protected !!