ರೈತರ ಹೋರಾಟವನ್ನು ಬೆಂಬಲಿಸಿ ಐಕ್ಯ ವೇದಿಕೆಯಿಂದ ಬ್ರಹತ್ ಹೆದ್ದಾರಿ ತಡೆ ಚಳುವಳಿ

 ರೈತರ ಹೋರಾಟವನ್ನು ಬೆಂಬಲಿಸಿ ಐಕ್ಯ ವೇದಿಕೆಯಿಂದ ಬ್ರಹತ್ ಹೆದ್ದಾರಿ ತಡೆ ಚಳುವಳಿ
Share this post

ಮಂಗಳೂರು, ಸೆ 25: ರೈತ ಕಾರ್ಮಿಕ ದಲಿತ ವಿಧ್ಯಾರ್ಥಿ ಯುವಜನ ಮಹಿಳಾ ಸಂಘಟನೆಗಳು ಹಾಗೂ ವಿವಿಧ ಜಾತ್ಯಾತೀತ ಪಕ್ಷಗಳ ಐಕ್ಯ ವೇದಿಕೆಯಿಂದ ನಗರದಲ್ಲಿಂದು ನಂತೂರು ಜಂಕ್ಷನ್ ಬಳಿಯಲ್ಲಿ ಬ್ರಹತ್ ಹೆದ್ದಾರಿ ತಡೆ ಚಳುವಳಿ ನಡೆಯಿತು.

ರೈತ ಕಾರ್ಮಿಕ ವಿರೋಧಿ ಸುಗ್ರೀವಾಜ್ಞೆಗಳ ವಾಪಾಸಾತಿಗಾಗಿ,ಸಂಸದರನ್ನು ಅಮಾನತುಗೊಳಿಸಿದ ನರೇಂದ್ರ ಮೋದಿ ಸರಕಾರದ ಫ್ಯಾಸಿಸ್ಟ್ ನಡೆಯನ್ನು ಹಾಗೂ ರೈತ ಕಾರ್ಮಿಕರ ವಿರೋಧಿ ನಡೆಯ ವಿರುದ್ದ ಪ್ರತಿಭಟನಾಕಾರರು ಘೋಷಣೆ ಕೂಗಿದರು.

ಪ್ರತಿಭಟನೆಯಲ್ಲಿ AIKS,ರಾಜ್ಯ ರೈತ ಸಂಘ, CITU, AITUC, INTUC, ದಲಿತ ಸಂಘಟನೆಗಳು, SFI,NSUI,DYFI,ಯುವ ಕಾಂಗ್ರೆಸ್, JMS, ಮಹಿಳಾ ಕಾಂಗ್ರೆಸ್, ಕನ್ನಡ ಪರ ಸಂಘಟನೆಗಳು, ರಾಜಕೀಯ ಪಕ್ಷಗಳಾದ ಕಾಂಗ್ರೆಸ್, CPIM, CPI, JDS, AAP, ಸಾಮಾಜಿಕ ಹೋರಾಟಗಾರರು,ಸಾಮಾಜಿಕ ಚಿಂತಕರು ಮೊದಲಾದವರು ಭಾಗವಹಿಸಿದ್ದರು.

Subscribe to our newsletter!

Other related posts

error: Content is protected !!