ಅಬಕಾರಿ ದಾಳಿ : ಗೋವಾ ಮದ್ಯ ವಶ
![ಅಬಕಾರಿ ದಾಳಿ : ಗೋವಾ ಮದ್ಯ ವಶ](https://thecanarapost.com/wp-content/uploads/2020/10/F-image-850x552.jpg)
![](https://1.bp.blogspot.com/-p2R055mcQ3w/X0OyrVo7UMI/AAAAAAAAFKQ/I7BOdpZJqcgmCwsU90JB09_ahxCrpTAwwCLcBGAsYHQ/s640/WhatsApp%2BImage%2B2020-08-24%2Bat%2B5.48.24%2BPM.jpeg)
ಕಾರವಾರ ಅಗಸ್ಟ್ 24: ಕಾರವಾರ ತಾಲೂಕಿನ ಮಲ್ಲಾಪೂರ ಗ್ರಾಮ ಲಕ್ಷ್ಮೀ ನಗರದಲ್ಲಿರುವ ಪಣೀಕರ ಎಂಬುವವರ ಮಾಲಿಕತ್ವದಲ್ಲಿದ್ದ ತಗಡಿನ ಶೆಡ್ಡಿನಲ್ಲಿ ಅಬಕಾರಿ ತಂಡವು ಇತ್ತಿಚಿಗೆ ದಾಳಿ ನಡೆಸಿ, ಗೋವಾ ರಾಜ್ಯದ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡಲು ದಾಸ್ತಾನಿಸಿಟ್ಟಿರುವುದನ್ನು ಜಪ್ತು ಪಡಿಸಿಕೊಂಡಿದೆ.
ದಾಳಿ ನಡೆಸಿದ ತಂಡವು ಅಂದಾಜು ₹ 85,302 ಮೌಲ್ಯದ 183.960 ಲೀಟರ್ ಗೋವಾ ಮದ್ಯ ಹಾಗೂ 99.000 ಲೀಟರ್ ಗೋವಾ ಫೆನ್ನಿಯನ್ನು ವಶಪಡಿಸಿಕೊಂಡಿರುತ್ತದೆ.
ಅದೇ ರೀತಿ ಅಮದ್ದಳ್ಳಿ ಗ್ರಾಮ ಗಾಂವಕ್ಕರವಾಡದ ವಿಷ್ಣು ಅನಂತ ತಳೆಕರ ಇವರ ಮನೆಯ ಹಿಂದುಗಡೆ ಇರುವ ಶೆಡ್ಡಿನಲ್ಲಿ ದಾಳಿ ನಡೆಸಿ ಅಂದಾಜು ₹ 90,300 ಮೌಲ್ಯದ 203.400 ಲೀಟರ್ ಗೋವಾ ಮದ್ಯ 40.000 ಲೀಟರ್ ಗೋವಾ ಬಿಯರ್ ವಶಪಡಿಸಿಕೊಳ್ಳಲಾಗಿದೆ. ಆರೋಪಿತರು ತಲೆಮರೆಸಿಕೊಂಡಿರುವರು.
ಈ ಬಗ್ಗೆ ಕಾರವಾರ ವಲಯದ ಅಬಕಾರಿ ನಿರೀಕ್ಷಕರು ಈ ಎರಡೂ ಪ್ರಕರಣಗಳನ್ನು ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ. ದಾಳಿ ಸಂದರ್ಭದಲ್ಲಿ ಅಬಕಾರಿ ನಿರೀಕ್ಷಕರಾದ ಗಣೇಶ ನಾಯ್ಕ ಅಧಿನ ಸಿಂಬ್ಬಂದಿಗಳಾದ ಪ್ರವೀಣ ಕುಮಾರ ಕಲ್ಲೋಳಿ, ಶಿವಾನಂದ ಕೋರಡ್ಡಿ, ನಾಗರಾಜ ಹೂವಿನಾಳ, ವಿರೇಶ ಕುರಿ, ವಾಹನ ಚಾಲಕರಾದ ರವಿಚಂದ್ರ ನಾಯ್ಕ ಇದ್ದರು.
![](https://1.bp.blogspot.com/-EdUtW_-p_Bk/X0OyrF0Z6fI/AAAAAAAAFKU/PXQyTiaNBwovyox7e2AilgxCU94C7j40wCLcBGAsYHQ/s640/WhatsApp%2BImage%2B2020-08-24%2Bat%2B5.48.25%2BPM.jpeg)