ಉಡುಪಿ: ವಿದ್ಯುತ್ ಅದಾಲತ್

 ಉಡುಪಿ: ವಿದ್ಯುತ್ ಅದಾಲತ್
Share this post

ಉಡುಪಿ, ನ 08, 2022: ಮೆಸ್ಕಾಂ ವತಿಯಿಂದ ಗ್ರಾಮೀಣ ಪ್ರದೇಶಗಳಲ್ಲಿನ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಪ್ರತಿ ತಿಂಗಳ ಮೂರನೇ ಶನಿವಾರ ವಿದ್ಯುತ್ ಅದಾಲತ್ ಅನ್ನು ಹಮ್ಮಿಕೊಳ್ಳಲಾಗಿದೆ.

ಈ ತಿಂಗಳಿನ ವಿದ್ಯುತ್ ಅದಾಲತ್ ನ.19 ರಂದು ಹೆಬ್ರಿ ತಾಲೂಕಿನ ಕಬ್ಬಿನಾಲೆ, ಕಾಪು ತಾಲೂಕಿನ ಕಟ್ಟಿಂಗೇರಿ ಮತ್ತು ಪಿಲಾರು, ಕಾರ್ಕಳ ತಾಲೂಕಿನ ಮುಡಾರು ಮತ್ತು ಬೋಳ, ಕುಂದಾಪುರ ತಾಲೂಕಿನ ಬಡಾಕೆರೆ, ಹಾರ್ದಳ್ಳಿ-ಮಂಡಳ್ಳಿ ಮತ್ತು ಹೊಂಬಾಡಿ-ಮಂಡಾಡಿ, ಬೈಂದೂರು ತಾಲೂಕಿನ ಹೊಸೂರು ಹಾಗೂ ಬ್ರಹ್ಮಾವರ ತಾಲೂಕಿನ ಹೆಗ್ಗುಂಜೆ ಮತ್ತು ಯಡ್ತಾಡಿಯಲ್ಲಿ ನಡೆಯಲಿದೆ.

ಡಿಸೆಂಬರ್ 17 ರಂದು ಹೆಬ್ರಿ ತಾಲೂಕಿನ ಬೆಳೆಂಜೆ, ಕಾಪು ತಾಲೂಕಿನ ಆತ್ರಾಡಿ ಮತ್ತು ಕುರ್ಕಾಲು, ಕಾರ್ಕಳ ತಾಲೂಕಿನ ಪಳ್ಳಿ ಮತ್ತು ಮಿಯ್ಯಾರು, ಕುಂದಾಪುರ ತಾಲೂಕಿನ ಕನ್ಯಾನ, ಹೆಂಗವಳ್ಳಿ ಮತ್ತು ತೆಕ್ಕಟ್ಟೆ, ಬೈಂದೂರು ತಾಲೂಕಿನ ಕೆರ್ಗಾಲ್ ಹಾಗೂ ಬ್ರಹ್ಮಾವರ ತಾಲೂಕಿನ ಕಚ್ಚೂರು ಮತ್ತು ಕಾವಡಿಯಲ್ಲಿ ನಡೆಯಲಿದೆ.

ಜನವರಿ 21 ರಂದು ಕಾಪು ತಾಲೂಕಿನ ಅಲೆವೂರು ಮತ್ತು ನಂದಿಕೂರು, ಕಾರ್ಕಳ ತಾಲೂಕಿನ ಶಿರ್ಲಾಲು, ಕುಕ್ಕುಂದೂರು ಮತ್ತು ಮುಲ್ಲಡ್ಕ, ಕುಂದಾಪುರ ತಾಲೂಕಿನ ತ್ರಾಸಿ, ಶಂಕರನಾರಾಯಣ ಮತ್ತು ಕೋಣಿ, ಬೈಂದೂರು ತಾಲೂಕಿನ ಉಳ್ಳೂರು ಮತ್ತು ಬ್ರಹ್ಮಾವರ ತಾಲೂಕಿನ ಹಾರಾಡಿ ಮತ್ತು ಅಚ್ಲಾಡಿಯಲ್ಲಿ ನಡೆಯಲಿದ್ದು, ಸಾರ್ವಜನಿಕರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಮೆಸ್ಕಾಂನ ಪ್ರಕಟಣೆ ತಿಳಿಸಿದೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!