ಮಂಗಳೂರು: ಪಂಡಿತ್ ಜಯತೀರ್ಥ ಮೇವುಂಡಿ ಅವರಿಂದ ಸಂತವಾಣಿ

 ಮಂಗಳೂರು: ಪಂಡಿತ್ ಜಯತೀರ್ಥ ಮೇವುಂಡಿ ಅವರಿಂದ ಸಂತವಾಣಿ
Share this post
ಪಂ|| ಜಯತೀರ್ಥ ಮೇವುಂಡಿ

ಮಂಗಳೂರು, ಅ 28, 2022: ಕಾಶೀಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀ ಪಾದಂಗಳವರ ಮಂಗಳೂರಿನ ಚಾತುರ್ಮಾಸ್ಯದ ಅಂಗವಾಗಿ ಸುಧೀಂದ್ರ ಡಯಾಗ್ನಸ್ಟಿಕ್ ಸೆಂಟರ್‍ನ ಉದ್ಘಾಟನಾ ಸಮಾರಂಭದ ಪ್ರಯುಕ್ತ ಮಂಗಳೂರಿನ ರಥಬೀದಿಯಲ್ಲಿರುವ ಶ್ರೀ ವೆಂಕಟ್ರಮಣ ದೇವಸ್ಥಾನದ ರಾಜಾಂಗಣದಲ್ಲಿ ಶ್ರೀ ಸುಕೃತೀಂದ್ರ ಸ್ವಾಮಿ ಸೇವಾ ಪ್ರತಿಷ್ಠಾನದ ವತಿಯಿಂದ ಪಂಡಿತ್ ಜಯತೀರ್ಥ ಮೇವುಂಡಿ ಅವರ ಸಂತವಾಣಿ ಕಾರ್ಯಕ್ರಮ ಅ. 29 ರಂದು ನಡೆಯಲಿದೆ.

ಸಂಜೆ 6.00ರಿಂದ ಕಾರ್ಯಕ್ರಮ ನಡೆಯಲಿದ್ದು, ತಬ್ಲಾದಲ್ಲಿ ಬೆಂಗಳೂರಿನ ಪಂ|| ರಾಜೇಂದ್ರ ನಾಕೋಡ್, ಹಾರ್ಮೋನಿಯಂನಲ್ಲಿ ಮಂಗಳೂರಿನ ಪ್ರ್ರೊ|| ನರೇಂದ್ರ ಎಲ್. ನಾಯಕ್ ಸಹಕರಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸುವ ಸಾರ್ವಜನಿಕರು ಹದಿನೈದು ನಿಮಿಷದ ಮೊದಲು ಬಂದ ಆಸೀನರಾಗಬೇಕು ಎಂದು ಪ್ರತಿಷ್ಠಾನವು ಪ್ರಕಟಣೆಯಲ್ಲಿ ತಿಳಿಸಿದೆ.

ಅ. 30ರ ಭಾನುವಾರದಂದು ಪದ್ಮಶ್ರೀ ಪುರಸ್ಕೃತ ಮುಂಬೈನ ಪಂ|| ಅನೂಪ್ ಜಲೋಟಾ ಅವರಿಂದ ಭಜನ್ ಸಂಧ್ಯಾ ಹಾಗೂ ಅ. 31ರ ಸೋಮವಾರದಂದು ಸ್ವರಾಧೀಶ್ ಬಿರುದಾಂಕಿತ ಡಾ|| ಭರತ್ ಬಳವಳ್ಳಿ ಇವರಿಂದ ಅಭಂಗವಾಣಿ ಕಾರ್ಯಕ್ರಮ ನಡೆಯಲಿವೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!