ನಟ ವಿ ರವಿಚಂದ್ರನ್ ಅವರಿಗೆ ಮಾತೃ ವಿಯೋಗ: ಮುಖ್ಯಮಂತ್ರಿ ಗಳ ಸಂತಾಪ

 ನಟ ವಿ ರವಿಚಂದ್ರನ್ ಅವರಿಗೆ ಮಾತೃ ವಿಯೋಗ: ಮುಖ್ಯಮಂತ್ರಿ ಗಳ ಸಂತಾಪ
Share this post

ಬೆಂಗಳೂರು, ಫೆ 28, 2022: ಕನ್ನಡದ ಖ್ಯಾತ ನಟ ವಿ.ರವಿಚಂದ್ರನ್ ಅವರ ತಾಯಿ, ಖ್ಯಾತ ನಿರ್ಮಾಪಕ ವೀರಸ್ವಾಮಿ ಪತ್ನಿ ಪಟ್ಟಮ್ಮಾಳ್ ವೀರಸ್ವಾಮಿ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ರವಿಚಂದ್ರನ್ ಅವರ ಕುಟುಂಬದ ಕೊಡುಗೆ ಅಪಾರ. ಪಟ್ಟಾಮ್ಮಾಳ್ ಅವರ ಪತಿ ವೀರಾಸ್ವಾಮಿ ಅವರು ಕನ್ನಡದ ಜನಪ್ರಿಯ ಚಿತ್ರಗಳನ್ನು ನಿರ್ಮಿಸಿದ್ದರು. ಅವರ ಈಶ್ವರಿ ಪ್ರೊಡಕ್ಷನ್ ಬ್ಯಾನರ್ ನಿಂದಾಗಿಯೇ ಬದುಕು ಕಟ್ಟಿಕೊಂಡ ಹಲವಾರು ಕುಟುಂಬಗಳಿವೆ. ಇದಕ್ಕೆ ಒತ್ತಾಸೆಯಾಗಿ ನಿಂತು, ಪೊರೆದವರು ಪಟ್ಟಾಮ್ಮಾಳ್ ಅವರು .

ಪಟ್ಟಾಮ್ಮಾಳ್ ವೀರಾಸ್ವಾಮಿ ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ. ಅವರ ಕುಟುಂಬದವರಿಗೆ ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯ ಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!