ಕಾರವಾರ: ಕನ್ನಡ ಸಾಹಿತ್ಯ ಪರಿಷತ್ತಿನಿಂದ ಚಂದ್ರಶೇಖರ ಪಾಟೀಲರಿಗೆ ನುಡಿನಮನ

 ಕಾರವಾರ: ಕನ್ನಡ ಸಾಹಿತ್ಯ ಪರಿಷತ್ತಿನಿಂದ ಚಂದ್ರಶೇಖರ ಪಾಟೀಲರಿಗೆ ನುಡಿನಮನ
Share this post

ಕಾರವಾರ ಜ 10, 2022: ಕನ್ನಡ ನಾಡು ನುಡಿಯ ಧೀಮಂತ ಲೇಖಕ, ಖ್ಯಾತ ವಿಮರ್ಶಕ ಕ.ಸಾ.ಪ.ದ ಮಾಜಿ ರಾಜ್ಯಾಧ್ಯಕ್ಷ ಪ್ರೋ. ಚಂದ್ರಶೇಖರ ಪಾಟೀಲರಿಗೆ ಕಾರವಾರ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನುಡಿ ನಮನ ಅರ್ಪಿಸಲಾಯಿತು.

ಕಾರ್ಯಕ್ರಮದಲ್ಲಿ ಸರ್ಕಾರಿ ಪ.ಪೂ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪತ್ತೇಕರ ಮಾತನಾಡುತ್ತ ಧಾರವಾಡದಲ್ಲಿ ಕಳೆದ ವಿದ್ಯಾರ್ಥಿ ಜೀವನ ಹಾಗೂ ಚಂಪಾರವರ ವ್ಯಕ್ತಿತ್ವವನ್ನು ಬಣ್ಣಿಸಿದರು. ಉಪನ್ಯಾಸಕ ಜಿ.ಡಿ.ಮನೋಜೆ ಚಂಪಾರವರ ತರಗತಿಗಳಲ್ಲಿ ಹಾಜರಾಗುತ್ತಿದ್ದ ಸಂದರ್ಭವನ್ನು ಸ್ಮರಿಸಿಕೊಂಡರು.

ಜನಶಕ್ತಿ ವೇದಿಕೆಯ ಅಧ್ಯಕ್ಷರಾದ ಮಾಧವ ನಾಯಕ ಹೋರಾಟದ ಮನೋಭಾವವನ್ನು ವರ್ಣಿಸಿದರು.

ಕ.ಸಾ.ಪ.ದ ಮಾಜಿ ಅಧ್ಯಕ್ಷರಾದ ರಾಮಾ ನಾಯ್ಕರು ಅವರೊಂದಿಗಿನ ಒಡನಾಟ ಹಾಗೂ ಸಾಹಿತ್ಯ ಪರಿಷತ್ತಿನ ಸಂಬಂಧವನ್ನು ನೆನಪಿಸಿಕೊಂಡರು. ಶಿಕ್ಷಕರಾದ ಗಣೇಶ ಬಿಷ್ಠಣ್ಣನವರ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ನುಡಿನಮನ ಕಾರ್ಯಕ್ರಮದಲ್ಲಿ ಕ.ಸಾ.ಪ.ಸದಸ್ಯರಾದ ಮಾರುತಿ ಬಾಡಕರ, ರಮೇಶ ಗುನಗಿ, ಖೈರುನ್ನಿಸಾ ಶೇಖ ಉಪಸ್ಥಿತರಿದ್ದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!