ಉಡುಪಿ: ಆದ್ಯತೆ ಮೇರೆಗೆ ಬಸ್ ಚಾಲಕ, ನಿರ್ವಾಹಕರಿಗೆ ಕೋವಿಡ್ ಲಸಿಕೆ

 ಉಡುಪಿ: ಆದ್ಯತೆ ಮೇರೆಗೆ ಬಸ್  ಚಾಲಕ, ನಿರ್ವಾಹಕರಿಗೆ ಕೋವಿಡ್ ಲಸಿಕೆ
Share this post

ಉಡುಪಿ, ಜೂನ್ 10, 2021: ಜಿಲ್ಲೆಯ ಉಡುಪಿ, ಕಾಪು, ಬ್ರಹ್ಮಾವರ, ಕುಂದಾಪುರ, ಬೈಂದೂರು, ಹೆಬ್ರಿ, ಕಾರ್ಕಳ, ತಾಲೂಕುಗಳಲ್ಲಿ ವಾಸಿಸುತ್ತಿರುವ 18 ರಿಂದ 44 ವರ್ಷದೊಳಗಿನ ವಯೋಮಿತಿಯ ಬಸ್ ಚಾಲಕರು, ನಿರ್ವಾಹಕರು ಹಾಗೂ ಸಹಾಯಕರುಗಳಿಗೆ ಆದ್ಯತೆ ಮೇರೆಗೆ ಉಚಿತ ಕೋವಿಡ್-19 ಲಸಿಕೆಯನ್ನು ನೀಡಲಾಗುವುದು.  

ಈ ಹಿನ್ನಲೆಯಲ್ಲಿ ಎಲ್ಲಾ ಬಸ್ ಮಾಲಕರುಗಳು ತಮ್ಮ ಸಂಘದ ಮೂಲಕ, ಮಾಲಕರುಗಳು ಅನೆಕ್ಚರ್-3 ರಲ್ಲಿ ಅರ್ಜಿಗಳನ್ನು ಕ್ರೋಢಿಕರಿಸುವ ಮೂಲಕ, ಅಥವಾ ಬಸ್ ಚಾಲಕರುಗಳು, ನಿರ್ವಾಹಕರುಗಳು ಹಾಗೂ ಸಹಾಯಕರುಗಳು ಖುದ್ದಾಗಿ ಭಾವಚಿತ್ರ ಹೊಂದಿರುವ ಆಧಾರ್ ಮತ್ತು ಡಿಎಲ್/ ಸಿಎಲ್‌ ಜೆರಾಕ್ಸ್ ಮೊಬೈಲ್ ಸಂಖ್ಯೆಯೊಂದಿಗೆ ಅರ್ಜಿಗಳನ್ನು ಅನೆಕ್ಚರ್-3 ರಲ್ಲಿ ಭರ್ತಿ ಮಾಡಿ , ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿಯವರ ಕಚೇರಿಗೆ ನೀಡಿ ಸಂಬಂಧಿಸಿದ ಲಸಿಕಾ ಅನೆಕ್ಚರ್ ಪಡೆದು ಜಿಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ (ಪಿಹೆಚ್‌ಸಿ) ಕೋವಿಡ್-19 ಲಸಿಕೆಗಳನ್ನು ಪಡೆದುಕೊಳ್ಳಬಹುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.

Subscribe to our newsletter!

Other related posts

error: Content is protected !!