ಕುಕ್ಕೆಹಳ್ಳಿ: ಸರಕಾರಿ ಜಮೀನು ಅತಿಕ್ರಮಿಸಿದವರ ವಿರುದ್ಧ ಕಠಿಣ ಕ್ರಮ

 ಕುಕ್ಕೆಹಳ್ಳಿ: ಸರಕಾರಿ ಜಮೀನು ಅತಿಕ್ರಮಿಸಿದವರ ವಿರುದ್ಧ ಕಠಿಣ ಕ್ರಮ
Share this post

ಉಡುಪಿ, ಜೂನ್ 07, 2021: ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಉಡುಪಿ ತಹಶೀಲ್ದಾ ರ್ ರೊಂದಿಗೆ ಕುಕ್ಕೆಹಳ್ಳಿ ಗ್ರಾಮಕ್ಕೆ ಬೇಟಿ ನೀಡಿದ್ದ ಸಂದರ್ಭದಲ್ಲಿ , ಗ್ರಾಮ ಪಂಚಾಯತಿ ಮತ್ತು ಗ್ರಾಮಕರಣಿಕರ ಕಛೇರಿಯ ಪಕ್ಕದಲ್ಲಿ , ಉಡುಪಿ ಕೊಳಲಗಿರಿ- ಪರ್ಡೂರು ಪಿಡಬ್ಲ್ಯೂಡಿ ರಸ್ತೆಗೆ ಹೊಂದಿಕೊಂಡಿರುವ, ಸರ್ಕಾರಕ್ಕೆ ಸೇರಿದ ಜಮೀನಿನ ಅನಧಿಕೃತ ಅತಿಕ್ರಮಣವಾಗಿರುವುದನ್ನು ಗಮನಿಸಿದ್ದು, ಅದರಲ್ಲಿ ಇರುವ ಬೆಲೆಬಾಳುವ ಮರಮಟ್ಟುಗಳನ್ನು ನಲಸಮ ಮಾಡಿ ಬೆಲೆಬಾಳುವ ಸರ್ಕಾರಿ ಜಮೀನನ್ನು ಕಬಳಿಸಿರುವುದು ಕಂಡು ಬಂದಿದೆ.

ಕೋವಿಡ್ ಸಂದರ್ಭದಲ್ಲಿ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಸರ್ಕಾರಿ ಜಮೀನನ್ನು ಅತಿಕ್ರಮಿಸುವ
ಕ್ರಮವು ಕಾನೂನುಬಾಹಿರವಾಗಿದ್ದು, ಸ್ಥಳದಲ್ಲಿ ಇದ್ದ ಅಪರ ಜಿಲ್ಲಾಧಿಕಾರಿ ಅತಿಕ್ರಮಣವನ್ನು ತೆರವುಗೊಳಿಸಲು ಹಾಗೂ
ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲು ತಹಶೀಲ್ದಾರ್ ಮತ್ತು ಗ್ರಾಮಕರಣಿಕರಿಗೆ ನಿರ್ದೇಶನ ನೀಡಿದರು.

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕ ವಿತರಣೆ ಕುರಿತು ಯಾವುದೇ ಸಮಸ್ಯೆ ಇರುವುದಿಲ್ಲವೆಂದು ಹಾಗೂ ಮಳೆಗಾಲದಲ್ಲಿ ಮೇಲ್ದಾವಣಿಯಿಂದ ನೀರು ಬರುತ್ತಿದ್ದು, ಮಳೆ ನೀರಿನಿಂದ ಔಷಧಿ ಸಾಮಾಗ್ರಿಗಳು ಹಾನಿಯಾಗುತ್ತಿರುವುದಾಗಿ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಅಪರ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು, ಕೂಡಲೇ ಎಸ್ ಡಿ ಆರ್ ಎಫ್ ನಿಧಿಯಿಂದ ಕಾಮಗಾರಿ ಕೈಗೆತ್ತಿಕೊಂಡು ಪೂರ್ಣಗೊಳಿಸಲು ಕಾರ್ಯಪಾಲಕ ಅಭಿಯಂತರರು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಗೆ ತಿಳಿಸಿದರು.

ನಂತರ ಗ್ರಾಮ ಪಂಚಾಯತ್ ಕಛೇರಿಯಲ್ಲಿ ಅಧ್ಯಕ್ಷರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಹೋಂ
ಕ್ಯಾರಂಟೈನ್, ಸೀಲ್ ಡೌನ್ ಮತ್ತು ಕೋವಿಡ್ ಕ್ರಮಗಳ ಕುರಿತು ಸಭೆ ನಡೆಸಿ ನಿರ್ದೇಶನ ನೀಡಿದರು.

Subscribe to our newsletter!

Other related posts

error: Content is protected !!