ಕುಂದಾಪುರ: ಅಂಚೆ ಖಾತೆಗಳ ಸಮಗ್ರ ಪರಿಶೀಲನೆ

 ಕುಂದಾಪುರ: ಅಂಚೆ ಖಾತೆಗಳ ಸಮಗ್ರ ಪರಿಶೀಲನೆ
Share this post

ಉಡುಪಿ, ಮೇ 19, 2021: ಕುಂದಾಪುರ ಗಾಂಧಿ ಮೈದಾನ ಅಂಚೆ ಕಚೇರಿಯ ಎಲ್ಲಾ SB/RD/TD/MIS/SSA/SCSS/NSC/KVP ಇತ್ಯಾದಿ ಖಾತೆಗಳ ಸಮಗ್ರ ಪರಿಶೀಲನೆ ನಡೆಯುತ್ತಿದ್ದು, ಗ್ರಾಹಕರುತಮ್ಮ ಪಾಸ್ ಪುಸ್ತಕಗಳನ್ನು ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿ ಇರುವ ಗಾಂಧಿ ಮೈದಾನ ಅಂಚೆ ಕಚೇರಿಯಲ್ಲಿ ಬೆಳಗ್ಗೆ 8:30 ರಿಂದ, ಮಧ್ಯಾಹ್ನ 12:30 ರ ಒಳಗೆ , ಮೇ 24 ರಿಂದ ಮೇ 29 ರ ಒಳಗೆ ಅಂಚೆ ತನಿಖಾಧಿಕಾರಿಗೆ ಸಲ್ಲಿಸಿ ಪರಿಶೀಲನೆಗೆ ಸಹಕರಿಸಬೇಕು. (ಮೇ 26 ರಂದು ಅಂಚೆ ಕಚೇರಿಗೆ ರಜೆ ಇರುತ್ತದೆ)

ಪಾಸ್ ಪುಸ್ತಕದಲ್ಲಿ ಯಾವುದೇ ವ್ಯತ್ಯಾಸಗಳು ಇಲ್ಲದಿದ್ದಲ್ಲಿ ತಕ್ಷಣ ಪಾಸ್ ಪುಸ್ತಕಗಳನ್ನು ಪರಿಶೀಲಿಸಿ ಖಾತೆದಾರರಿಗೆ ನೀಡಲಾಗುವುದು. ಯಾವುದೇ ಲೋಪದೋಷ ಕಂಡುಬಂದಲ್ಲಿ ಹೆಚ್ಚಿನ ತನಿಖೆಗಾಗಿ ಪಾಸ್ ಪುಸ್ತಕವನ್ನು ಅಂಚೆ ತನಿಖಾಧಿಕಾರಿಗಳಿಗೆ ನೀಡಿ ರಶೀದಿ ಪಡೆಯಕೊಳ್ಳಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಅಂಚೆ ಸಹಾಯಕ ಅಧೀಕ್ಷಕರು ಕುಂದಾಪುರ ಉತ್ತರ ಉಪವಿಭಾಗ, ಒಂದನೇ ಮಹಡಿ, ಕುಂದಾಪುರ ಪ್ರಧಾನ ಅಂಚೆ ಕಚೇರಿ, ಕುಂದಾಪುರ-576201 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!