ಮಾ.31 ರಿಂದ ಸಿದ್ದಾಪುರದಲ್ಲಿ ಮದ್ಯಸಾಗಾಟ ಮತ್ತು ಮಾರಾಟ ನಿಷೇಧ

 ಮಾ.31 ರಿಂದ ಸಿದ್ದಾಪುರದಲ್ಲಿ ಮದ್ಯಸಾಗಾಟ ಮತ್ತು ಮಾರಾಟ ನಿಷೇಧ
Share this post

ಕಾರವಾರ, ಮಾರ್ಚ್ 30 , 2021: ಜಿಲ್ಲೆಯ ಸಿದ್ದಾಪುರ ತಾಲೂಕಿನ ಕೊಂಡ್ಳಿ ಗ್ರಾಮದಲ್ಲಿ ಏ.6 ರ ವರೆಗೆ ನಡೆಯುವ ಮಾರಿಕಾಂಬಾ ಜಾತ್ರೆಯ ನಿಮಿತ್ತ ಮಾ.31 ಹಾಗೂ ಏ .6 ರಂದು ತಾಲೂಕು ವ್ಯಾಪ್ತಿಯಲ್ಲಿ ಮದ್ಯ ಸಾಗಾಟ ಮತ್ತು ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಆದೇಶ ಹೊರಡಿಸಿದ್ದಾರೆ.

ಸಿದ್ದಾಪುರದ ಕೊಂಡ್ಳಿಯಲ್ಲಿ ಮಾ.30 ರಿಂದ ಎ.6 ರವರೆಗೆ ಒಂಬತ್ತು ದಿವಸ ಮಾರಿಕಾಂಬಾ ಜಾತ್ರೆ ನಡೆಯಲಿದ್ದು, ಈ ಧಾರ್ಮಿಕ ಕಾರ್ಯಕ್ರಮಗಳಿಗೆ ರಾಜ್ಯದ ವಿವಿಧ ಕಡೆಗಳಿಂದ ಗಣ್ಯ ವ್ಯಕ್ತಿಗಳು ಹಾಗೂ ಹೆಚ್ಚಿನ ಸಂಖ್ಯೆಯಭಕ್ತಾದಿಗಳು ಆಗಮಿಸಲಿಸುವರಿಂದ ಈ ಸಮಯದಲ್ಲಿ ಸಾರ್ವಜನಿಕರ ಹಿತ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಠಿಯಿಂದ ಸಿದ್ದಾಪುರ ಪೊಲೀಸ್‍ ಠಾಣಾ ವ್ಯಾಪ್ತಿಯಲ್ಲಿ ಬಾರ್ ಹಾಗೂ ವೈನ್‍ಶಾಪ್ಗಳನ್ನು ಮುಚ್ಚಿಸಲು ಮತ್ತುಎಲ್ಲ ರೀತಿಯ ಮದ್ಯ ಸಾಗಾಟ ಹಾಗೂ ಮಾರಾಟವನ್ನುನಿಷೇಧಿಸುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!