ಉತ್ತರ ಕನ್ನಡ: ಅಹವಾಲು ಸ್ವೀಕಾರ ಹಾಗೂ ಜನ ಸಂಪರ್ಕ ಸಭೆ

 ಉತ್ತರ ಕನ್ನಡ: ಅಹವಾಲು ಸ್ವೀಕಾರ ಹಾಗೂ ಜನ ಸಂಪರ್ಕ ಸಭೆ
Share this post

ಕಾರವಾರ ಮಾರ್ಚ್ 29, 2021: ಜಿಲ್ಲೆಯ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪೋಲಿಸ್ ಠಾಣೆಯ ಅಧಿಕಾರಿಗಳು ಮಾರ್ಚ 30 ರಿಂದ ಏಪ್ರೀಲ್ 3 ರವರೆಗೆ ವಿವಿಧ ಸ್ಥಳಗಳಲ್ಲಿ ಅಹವಾಲು ಸ್ವೀಕಾರ ಹಾಗೂ ಜನ ಸಂಪರ್ಕ ಸಭೆಯನ್ನು ಹಮ್ಮಿಕೊಂಡಿದ್ದಾರೆ.

ಮಾ. 30 ರಂದು ಬೆಳಗ್ಗೆ 11 ರಿಂದ ಮದ್ಯಾಹ್ನ 1 ರವರೆಗೆ ಭಟ್ಕಳ, 3 ರಿಂದ ಸಂಜೆ 5 ರವರೆಗೆ ಹೊನ್ನಾವರ, 31 ರಂದು ಬೆಳಗ್ಗೆ 11 ರಿಂದ 1 ರವರೆಗೆ ಕುಮಟಾ ಹಾಗೂ ಮಧ್ಯಾಹ್ನ 3 ರಿಂದ ಸಂಜೆ 5 ರವರೆಗೆ ಅಂಕೋಲಾ, ಏ. 1 ರಂದು ಬೆಳಗ್ಗೆ 10 ರಿಂದ 12 ರವರೆಗೆ ಶಿರಸಿ, ಮಧ್ಯಾಹ್ನ 1 ರಿಂದ 3 ರವರೆಗೆ ಮುಂಡಗೋಡ, ಸಂಜೆ 4 ರಿಂದ 6 ರವರೆಗೆ ಯಲ್ಲಾಪುರ, ಏ. 3 ರಂದು ಬೆಳಗ್ಗೆ 10 ರಿಂದ 12 ರವರೆಗೆ ಜೋಯಿಡಾ ಹಾಗೂ 4 ರಿಂದ ಸಂಜೆ 6 ರವರೆಗೆ ಹಳಿಯಾಳ ಪ್ರವಾಸಿ ಮಂದಿರದಲ್ಲಿ ಅಹವಾಲು ಸ್ವೀಕಾರ ಹಾಗೂ ಜನ ಸಂಪರ್ಕ ಸಭೆ ನಡೆಸಲಾಗುತ್ತಿದೆ.

ಯಾವುದೇ ಸರ್ಕಾರಿ ಇಲಾಖೆಯವರು ಸರ್ಕಾರಿ ಕೆಲಸ ಮಾಡಿಕೊಡಲು ಸಾರ್ವಜನಿಕರಲ್ಲಿ ಲಂಚ ಕೇಳಿದರೆ ನೇರವಾಗಿ ಪಿ.ಐ, ಎ.ಸಿ.ಬಿ ಕಾರವಾರ ರವರ ಮೋ. ಸಂಖ್ಯೆ: 9480806297, 9480806298ಗೆ ದೂರು ನೀಡಬಹುದೆಂದು ಕಾರವಾರ ಭ್ರಷ್ಟಾಚಾರ ನಿಗ್ರಹ ದಳ ಪೋಲಿಸ್ ನಿರೀಕ್ಷರಾದ ಅಲಿ.ಎ.ಶೇಖ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!