ದೇವಸ್ಥಾನ- ದೈವಸ್ಥಾನಗಳ ಹೊಸ ವ್ಯವಸ್ಥಾಪನಾ ಸಮಿತಿ ರಚನೆ

 ದೇವಸ್ಥಾನ- ದೈವಸ್ಥಾನಗಳ ಹೊಸ ವ್ಯವಸ್ಥಾಪನಾ ಸಮಿತಿ ರಚನೆ
Share this post

ಮಂಗಳೂರು, ಮಾರ್ಚ್ 25, 2021: ದ.ಕ. ಜಿಲ್ಲೆಯ ಪ್ರವರ್ಗ ‘ಬಿ’ ಮತ್ತು ‘ಸಿ’ ಗೆ ಸೇರಿದ ದೇವಸ್ಥಾನ/ ದೈವಸ್ಥಾನಗಳಿಗೆ ಹೊಸದಾಗಿ ವ್ಯವಸ್ಥಾಪನಾ ಸಮಿತಿ ರಚಿಸುವ ಕುರಿತಂತೆ, ಆಸಕ್ತ ಭಕ್ತಾದಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು.  

ಅದರಂತೆ ನಿಗದಿತ ಸಮಯದೊಳಗೆ ಸ್ವೀಕೃತವಾಗಿರುವ ಅರ್ಜಿಗಳನ್ನು ಪೋಲೀಸ್ ಇಲಾಖೆ ಹಾಗೂ ತಹಶೀಲ್ದಾರ್ ಸತ್ಯಾಪನಾ ವರದಿಯೊಂದಿಗೆ ಪ್ರಸ್ತುತ ಸಾಲಿನ ಮಾರ್ಚ್ 3 ರಂದು ನಡೆದ ಜಿಲ್ಲಾ ಧಾರ್ಮಿಕ ಪರಿಷತ್ತಿನ ಸಭೆಯಲ್ಲಿ ಮಂಡಿಸಿ ಅರ್ಜಿದಾರರ ಅರ್ಹತೆ, ಅನುಭವ ಪೂರ್ವಾಪರ ವಿವರಗಳನ್ನು ಪರಿಶೀಲಿಸಿ ಒಟ್ಟು 26 ದೇವಸ್ಥಾನಗಳಿಗೆ 3 ವರ್ಷದ ಅವಧಿಗೆ ವ್ಯವಸ್ಥಾಪನಾ ಸಮಿತಿ ರಚಿಸಿ ಆದೇಶ ಹೊರಡಿಸಲಾಗಿದೆ.

ಪ್ರವರ್ಗ ‘ಬಿ’ ಮತ್ತು ‘ಸಿ’ ಗೆ ಸೇರಿದ ದೇವಸ್ಥಾನ/ ದೈವಸ್ಥಾನಗಳ ಪಟ್ಟಿ:

  • ಮಂಗಳೂರು ತಾಲೂಕಿನ ಶ್ರೀ ಮುಂಡಿತ್ತಾಯ ದೈವಸ್ಥಾನ- ಬೊಂಡಂತಿಲ
  • ಶ್ರೀ ಮಹಾಲಿಂಗೇಶ್ವರ ದೇವಸ್ಥಾನ – ಹಳೆಯಂಗಡಿ
  • ಪಾವಂಜೆ, ಪೊನ್ನಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ- ಸೂರಿಂಜೆ
  • ಶ್ರೀ ಶಂಭುಲಿಂಗೇಶ್ವರ ದೇವಸ್ಥಾನ- ಧರೆಗುಡ್ಡೆ
  • ಶ್ರೀ ವಿಷ್ಣುಮೂರ್ತಿ ದೇವಸ್ಥಾನ -ತೆಂಕಮಿಜಾರು
  • ಶ್ರೀ ಈಶ್ವರ ದೇವಸ್ಥಾನ -ಮಲ್ಲೂರು
  • ಶ್ರೀ ಮೊಗ್ರುಗುಡ್ಡೆ ಮಹಾದೇವ ದೇವಸ್ಥಾನ – ಕೆಂಜಾರು
  • ಶ್ರೀ ವಿಶ್ವನಾಥೇಶ್ವರ ದೇವಸ್ಥಾನ -ಉಳಾಯಿಬೆಟ್ಟು
  • ಶ್ರೀ ಮುಖ್ಯಪ್ರಾಣ ದೇವಸ್ಥಾನ- ಅಡ್ಡೂರು
  • ಶ್ರೀ ವಿಷ್ಣುಮೂರ್ತಿ ದೇವಸ್ಥಾನ-ಮೂಡುಶೆಡ್ಡೆ
  • ಶ್ರೀ ಸದಾಶಿವ ದೇವಸ್ಥಾನ- ಮುೂಳೂರು
  • ಶ್ರೀ ಸಾಂಬಸದಾಶಿವ ದೇವಸ್ಥಾನ- ಬಾರ್ದಿಲ ಕಪ್ಪೇಪದವು
  • ಶ್ರೀ ಜಾರಂದಾಯ  ದೇವಸ್ಥಾನ-ಕರ್ನಿರೆ
  • ಶ್ರೀ ಕಯ್ಯಾರು ಬ್ರಹ್ಮ ದೇವಸ್ಥಾನ -ದೇಲಂತಬೆಟ್ಟು
  • ಶ್ರೀ ವಿನಾಯಕ ದೇವಸ್ಥಾನ- ಧರೆಗುಡ್ಡೆ,
  • ಶ್ರೀ ಅರ್ಜುನಾಪುರ ಮಹಾಲಿಂಗೇಶ್ವರ ದೇವಸ್ಥಾನ- ಶಿರ್ತಾಡಿ
    ಬಂಟ್ವಾಳ ತಾಲೂಕಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ – ರಾಯಿ
  • ಶ್ರೀ ವಿಶ್ವನಾಥ ದೇವಸ್ಥಾನ – ಅಜ್ಜಿಬೆಟ್ಟು
  • ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನ – ಬದಿನಡಿ, ರಾಯಿ
  • ಬೆಳ್ತಂಗಡಿ ತಾಲೂಕಿನ ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನ – ಆರಂಬೋಡಿ
  • ಪುತ್ತೂರು ತಾಲೂಕಿನ ಶ್ರೀ ಸದಾಶಿವ ದೇವಸ್ಥಾನ – ಬನ್ನೂರು
  • ಶ್ರೀ ಮೃತ್ಯುಂಜೇಶ್ವರ ದೇವಸ್ಥಾನ- ನರಿಮೊಗರು
  • ಸುಳ್ಯ ತಾಲೂಕಿನ ಕೇರ್ಪಡ ಮಹಿಷಮರ್ಧಿನಿ ದೇವಸ್ಥಾನ-ಎಡಮಂಗಲ
  • ಶ್ರೀ ವಿಷ್ಣುಮೂರ್ತಿ ದೇವಸ್ಥಾನ- ಮಂಡೆಕೋಲು
  • ಪೊದೆ ಶ್ರೀ ವಿಷ್ಣುಮೂರ್ತಿ ದೇವ ದೇವಸ್ಥಾನ- ಮುರುಳ್ಯ
  • ಶ್ರೀ ವಿನಾಯಕ ದೇವಸ್ಥಾನ ಗೋಳಿಕಟ್ಟೆ – ಪಂಬೆತ್ತಾಡಿ

ಹೆಚ್ಚಿನ ಮಾಹಿತಿಗಾಗಿ ದೂ. ಸಂಖ್ಯೆ: 0824-2220576 ಸಂಪರ್ಕಿಸುವಂತೆ  ದ.ಕ ಜಿಲ್ಲಾ ಪದನಿಮಿತ್ತ ಕಾರ್ಯದರ್ಶಿ, ಜಿಲ್ಲಾ ಧಾರ್ಮಿಕ ಪರಿಷತ್, ಹಾಗೂ ಸಹಾಯಕ ಆಯುಕ್ತರು, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ಮಂಗಳೂರು ಇವರ ಕಚೇರಿ ಪ್ರಕಟಣೆ ತಿಳಿಸಿದೆ.

Subscribe to our newsletter!

Other related posts

error: Content is protected !!