ಡಿವೈಎಫ್‌ಐ, ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್ ಆಶ್ರಯದಲ್ಲಿ ರಕ್ತದಾನ ಶಿಬಿರ

 ಡಿವೈಎಫ್‌ಐ, ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್ ಆಶ್ರಯದಲ್ಲಿ ರಕ್ತದಾನ ಶಿಬಿರ
Share this post

ಮಂಗಳೂರು, ಮಾರ್ಚ್ 01, 2021: ಡಿವೈಎಫ್‌ಐ ಉರ್ವಸ್ಟೋರ್ ಘಟಕ ಹಾಗೂ ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್ ಕದ್ರಿ ಹಿಲ್ಸ್ ಇವರ ಜಂಟಿ ಆಶ್ರಯದಲ್ಲಿ ಎ.ಜೆ ಹಾಸ್ಪಿಟಲ್ ಬ್ಲಡ್ ಬ್ಯಾಂಕ್ ಸಹಕಾರದೊಂದಿಗೆ ಅಶೋಕನಗರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆದಿತ್ಯವಾರದಂದು ರಕ್ತದಾನ ಶಿಬಿರ ನಡೆಯಿತು.

ಲಯನ್ಸ್ ಕ್ಲಬ್ ಕದ್ರಿಹಿಲ್ಸ್‌ನ ರತ್ನಾಕರ ಪಿ ಹಾಗೂ ಜಗದೀಶ್ ಪೈರವರು ಶಿಬಿರಕ್ಕೆ ಚಾಲನೆ ನೀಡಿದರು. ಡಿವೈಎಫ್‌ಐ‌ನ ಜಿಲ್ಲಾ ಮುಖಂಡ ದಯಾನಂದ ಶೆಟ್ಟಿ ರಕ್ತದಾನ ಶಿಬಿರವನ್ನು ಉದ್ದೇಶಿಸಿ ಮಾತನಾಡಿದರು.

ಡಿವೈಎಫ್‌ಐ ಉರ್ವಸ್ಟೋರ್ ಘಟಕದ ಪ್ರಶಾಂತ್ ಎಂ.ಬಿ ಅಧ್ಯಕ್ಷತೆ ವಹಿಸಿದ್ದರು. ಡಿವೈಎಫ್‌ಐನ ಮುಖಂಡರಾದ ರಾಜೇಶ್ ಕುಲಾಲ್, ಎ.ಜೆ ಬ್ಲಡ್ ಬ್ಯಾಂಕ್‌ನ ಮೆನೇಜರ್ ಗೋಪಾಲಕೃಷ್ಣ ಉಪಸ್ಥಿತರಿದ್ದರು.

ಪ್ರಚಾರ್ ಆಚಾರ್ ಸ್ವಾಗತಿಸಿದರು.

Subscribe to our newsletter!

Other related posts

error: Content is protected !!