ರಾಜ್ಯ ಮಟ್ಟದಕ್ರೀಡಾಕೂಟಕ್ಕೆಆಯ್ಕೆ

 ರಾಜ್ಯ ಮಟ್ಟದಕ್ರೀಡಾಕೂಟಕ್ಕೆಆಯ್ಕೆ
Share this post

ಕಾರವಾರ, ಫೆ. 17, 2021: ನಗರದತಾಲೂಕಕ್ರೀಡಾಂಗಣದಲ್ಲಿಇತ್ತೀಚೆಗೆ ನಡೆದರಾಜ್ಯ ಸರ್ಕಾರಿ ನೌಕರರಜಿಲ್ಲಾ ಮಟ್ಟದಕ್ರೀಡಾಕೂಟದ ವಿವಿಧಕ್ರೀಡಾ ವಿಭಾಗಗಳಲ್ಲಿ ಭಾಗವಹಿಸಿದ್ದ ಅಬಕಾರಿ ಇಲಾಖೆಯ ಅಧಿಕಾರಿ ಸಂತೋಷ ಎಂ. ಕುಡಾಳಕರ, ಗಂಗಾಧರಕಲ್ಲೇದ, ಹೆಚ್.ಕೆ. ಖಾನ್‍ಹಾಗೂ ಸಿಬ್ಬಂದಿ ಎನ್.ಕೆ. ವೈದ್ಯ ಅವರು ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆಆಯ್ಕೆಯಾಗಿದ್ದಾರೆ.

ಜಿಲ್ಲಾ ಮಟ್ಟದ ಕ್ರೀಡಾಕೂಟದ100 ಮೀಟರ ಓಟದಲ್ಲಿ ಭಾಗವಹಿಸಿದ್ದ ಅಬಕಾರಿ ಉಪ ಅಧೀಕ್ಷಕ ಸಂತೋಷ ಎಂ. ಕುಡಾಳಕರ ಅವರು ದ್ವಿತೀಯ ಸ್ಥಾನ ಪಡೆದಿದ್ದಾರೆ.

ಶಿರಸಿ ವಲಯ ಕಚೇರಿಯ ಗಂಗಾಧರ ಕಲ್ಲೇದ ಎತ್ತರ ಜಿಗಿತದಲ್ಲಿ ಪ್ರಥಮ ಹಾಗೂ ವಾಲಿಬಾಲ್‍ತಂಡಕ್ಕೆ ಸ್ಥಾನ, ಅಂಕೋಲಾ ವಲಯದ ಅಬಕಾರಿ ಹೆಡ್‍ಕಾನ್‍ಸ್ಟೇಬಲ್ ಹೆಚ್.ಕೆ. ಖಾನ ಅವರು ಕೇರಮ್‍ ಡಬಲ್ಸ್‍ನಲ್ಲಿ ಪ್ರಥಮ, ಶಿರಸಿ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರ ಕಚೇರಿಯ ವಾಹನ ಚಾಲಕ ಎನ್.ಕೆ. ವೈದ್ಯ ಬ್ಯಾಡ್ಮಿಟನ್‍ನಲ್ಲಿ ಪ್ರಥಮ ಸ್ಥಾನ, ಕುಮಟಾ ವಲಯದ ಅಬಕಾರಿ ಪೇದೆ ಸೀತಾರಾಮಯ್ಯ ಮರಾಠಿ 1500ಮೀಟರ್‍ ಓಟದಲ್ಲಿ ತೃತೀಯ ಹಾಗೂ ಕಾರವಾರ ವಲೆಯದ ಅಬಕಾರಿ ಪೇದೆ ಪ್ರವೀಣ್ ಕಲ್ಲೋಳಿ ಕಬಡ್ಡಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ವಿಜೇತರಿಗೆ ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತೆ ಶೈಲಜಾ ಕೋಟೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಅಬಕಾರಿ ಉಪ ಆಯುಕ್ತೆ ವನಜಾಕ್ಷಿ ಎಂ.ಅವರು ಅಭಿನಂದನೆ ಸಲ್ಲಿಸಿದ್ದಾರೆ.

Subscribe to our newsletter!

Other related posts

error: Content is protected !!