ಕಾಶೀ ಮಠಾಧೀಶರ ದಿಗ್ವಿಜಯ ಸಂಪನ್ನ

 ಕಾಶೀ ಮಠಾಧೀಶರ ದಿಗ್ವಿಜಯ ಸಂಪನ್ನ
Share this post
ಕಾಶೀ ಮಠಾಧೀಶರ ದಿಗ್ವಿಜಯ ಸಂಪನ್ನ

ಮಂಗಳೂರು, ಫೆ 13, 2021: ಶ್ರೀ ಕಾಶೀ ಮಠ ಸಂಸ್ಥಾನದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿಗ್ವಿಜಯ ಮಹೋತ್ಸವ ಶನಿವಾರ ಸಂಪನ್ನಗೊಂಡಿತು.

ಮಂಗಳೂರಿನ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಳದಿಂದ ಪ್ರಾರಂಭಗೊಂಡು ಮಹಾಮಾಯ ದೇವಸ್ಥಾನ ರಸ್ತೆ , ಡೊಂಗರಕೇರಿ , ನ್ಯೂ ಚಿತ್ರ ವೃತ್ತ ಮೂಲಕ ರಥಬೀದಿಯಿಂದ ದೇವಳದವರೆಗೆ ವಿಜೃಂಭಣೆಯಿಂದ ಜರಗಿತು.

ದಿಗ್ವಿಜಯ ಯಾತ್ರೆ ಯ ದಾರಿಯುದ್ದಕ್ಕೂ ವಿದ್ಯುತ್ ದೀಪಾಲಂಕಾರ , ತಳಿರು ತೋರಣ ಗಳಿಂದ ಅಲಂಕರಿಸಲಾಗಿದ್ದು , ವೈದಿಕರಿಂದ ವೇದಘೋಷ ,  ಕೇರಳದ ಪ್ರಸಿದ್ಧ ಚಂಡೆ ವಾದನ , ಮಹಿಳಾ ಮಂಡಳಿಯವರಿಂದ ಭಜನೆ , ವಾದ್ಯ ಘೋಷ ದೊಂದಿಗೆ ನಡೆಯಿತು .

ಸಂಸ್ಥಾನದ ಆರಾಧ್ಯ ಶ್ರೀ ವ್ಯಾಸ ರಘುಪತಿ ನರಸಿಂಹ ದೇವರ ದರ್ಶನ ಮಾಡಿದ ಶ್ರೀಗಳು ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ ನೀಡಿದರು. ನಂತರ ಶ್ರೀಗಳ ದಿಗ್ವಿಜಯ ಯಾತ್ರೆ ನೆರವೇರಿತು.

ಈ ಸಂದರ್ಭದಲ್ಲಿ ದೇವಳದ ಮೊಕ್ತೇಸರರಾದ ಸಿ . ಎಲ್ . ಶೆಣೈ , ಪ್ರಶಾಂತ್ ರಾವ್ , ರಾಮಚಂದ್ರ ಕಾಮತ್ , ಮಂಗಳೂರು ದಕ್ಷಿಣ ಶಾಸಕ ಡಿ ವೇದವ್ಯಾಸ್ ಕಾಮತ್ , ಜಿ ಯಸ್ . ಬಿ . ದೇವಸ್ಥಾನದ ಒಕ್ಕೂಟದ ಅಧ್ಯಕ್ಷ ಎಂ . ಜಗನ್ನಾಥ್ ಕಾಮತ್ , ಕೊಕೊಚ್ಚಿನ್ ತಿರುಮಲ ದೇವಸ್ಥಾನದ ಮೊಕ್ತೇಸರರು ಮತ್ತು ಮುಂಬೈ , ದೆಹಲಿ , ಕೇರಳ ಪ್ರದೇಶದಲ್ಲಿರುವ ದೇವಳಗಳ ಪದಾಧಿಕಾರಿಗಳು ಹಾಗೂ ಸಮಾಜ ಬಾಂಧವರು ಪಾಲ್ಗೊಂಡರು . 

ಚಿತ್ರಗಳು : ಮಂಜು ನೀರೇಶ್ವಾಲ್ಯ

Subscribe to our newsletter!

Other related posts

error: Content is protected !!