ಯೋಗೀಶ್ ಪೂಜಾರಿ ವಾರಸುದಾರರಿಗೆ ಪರಿಹಾರ ಧನ ಹಸ್ತಾಂತರಿಸಿದ ರಘುಪತಿ ಭಟ್

 ಯೋಗೀಶ್ ಪೂಜಾರಿ ವಾರಸುದಾರರಿಗೆ ಪರಿಹಾರ ಧನ ಹಸ್ತಾಂತರಿಸಿದ ರಘುಪತಿ ಭಟ್
Share this post

ಉಡುಪಿ, ಫೆ 09, 2021: ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಲಕ್ಷ್ಮೀನಗರ ತೆಂಕನಿಡಿಯೂರಿನ ಯೋಗೇಶ್ ಪೂಜಾರಿಯವರ ವಾರಸುದಾರರಿಗೆ ಶಾಸಕ ಕೆ. ರಘುಪತಿ ಭಟ್ ಅವರ ಶಿಫಾರಸ್ಸಿನ ಮೇರೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ರೂ. 1.00 ಲಕ್ಷ ಮೊತ್ತ ಮಂಜೂರಾಗಿತ್ತು.

ಶಾಸಕ ರಘುಪತಿ ಭಟ್ ಪರಿಹಾರದ ಚೆಕ್ಕನ್ನು ಫೆ 8 ರಂದು ಯೋಗೀಶ್ ಪೂಜಾರಿ ಮನೆಗೆ ತೆರಳಿ ಅವರ ತಂಗಿ ಸುಲಕ್ಷ ಅವರಿಗೆ ವಿತರಿಸಿದರು.

ಈ ಸಂದರ್ಭ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾದ ವಿಜಯಪ್ರಕಾಶ್, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಶರತ್ ಬೈಲಕೆರೆ, ಪಂಚಾಯತ್ ಸದಸ್ಯರಾದ ಪ್ರದೀಪ್ ಶೆಟ್ಟಿ, ಪುಷ್ಪಾ, ಸ್ಥಳೀಯರಾದ ಸುನಂದ ಶೆಟ್ಟಿ, ರಂಜಿಪ್ ಶೆಟ್ಟಿ, ಹರೀಶ್ ಲಕ್ಷ್ಮೀನಗರ, ಸುಧಾಕರ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

Subscribe to our newsletter!

Other related posts

error: Content is protected !!