ಸಕಾಲ ಸೇವೆಯಡಿ ತೋಟಗಾರಿಕೆ ಇಲಾಖೆಯ ವಿವಿಧ ಸೇವೆ ಅಳವಡಿಕೆ

 ಸಕಾಲ ಸೇವೆಯಡಿ ತೋಟಗಾರಿಕೆ ಇಲಾಖೆಯ ವಿವಿಧ ಸೇವೆ ಅಳವಡಿಕೆ
Share this post

ಉಡುಪಿ, ಜನವರಿ 22, 2021: ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮದಡಿ ತೋಟಗಾರಿಕೆ ಇಲಾಖೆಯ ಮಣ್ಣು ವಿಶ್ಲೇಷಣೆ, ನೀರು ವಿಶ್ಲೇಷಣೆ, ಎಲೆ ವಿಶ್ಲೇಷಣೆ ಹಾಗೂ ಸಾವಯವ ವಿಶ್ಲೇಷಣೆ ಸೇವೆಗಳನ್ನು ಅಳವಡಿಸಲಾಗಿರುತ್ತದೆ.

 ಈ ಸೇವೆಗಳನ್ನು ಪಡೆಯಲು ಇಚ್ಛಿಸುವ ರೈತರು ಹತ್ತಿರದ ಸೇವಾಸಿಂಧು ಕೇಂದ್ರಗಳ ಮುಖಾಂತರ https://serviceonline.gov.in/karnataka ತಂತ್ರಾಂಶದಲ್ಲಿ ನೊಂದಾಯಿಸಿ, ನಿಗಧಿತ ಶುಲ್ಕ ಪಾವತಿಸಿ, ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಿ, ಸಂಬಂಧಪಟ್ಟ ಮಾದರಿಗಳನ್ನು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಸಸ್ಯ ಪೋಷಕಾಂಶ, ಜೈವಿಕ ಕೇಂದ್ರ, ಅಂಚೆ ಪೆಟ್ಟಿಗೆ ಸಂಖ್ಯೆ: 7648, ಹುಳಿಮಾವು, ಬನ್ನೇರುಘಟ್ಟ ಮುಖ್ಯ ರಸ್ತೆ, ಬೆಂಗಳೂರು-560076 ವಿಳಾಸಕ್ಕೆ ಸಲ್ಲಿಸಬೇಕು.

ಮಾದರಿ ಸ್ವೀಕರಿಸಿದ ನಂತರ ನಿಗದಿತ ಅವಧಿಯೊಳಗೆ ವಿಶ್ಲೇಷಣಾ ವರದಿಯನ್ನು ಆನ್‌ಲೈನ್‌ನಲ್ಲಿ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ

  • ತೋಟಗಾರಿಕೆ ಉಪ ನಿರ್ದೇಶಕರು ಜಿಲ್ಲಾ ಪಂಚಾಯತ್ ಉಡುಪಿ ದೂರವಾಣಿ ಸಂಖ್ಯೆ: 0820-2531950,
  • ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಉಡುಪಿ ತಾಲೂಕು ದೂರವಾಣಿ ಸಂಖ್ಯೆ: 0820-2522837,
  • ಕುಂದಾಪುರ ತಾಲೂಕು ದೂರವಾಣಿ ಸಂಖ್ಯೆ: 08254-230813,
  • ಕಾರ್ಕಳ ತಾಲೂಕು ದೂರವಾಣಿ ಸಂಖ್ಯೆ: 08258-230288

ಸಂಪರ್ಕಿಸುವಂತೆ ಜಿಲ್ಲಾ ಪಂಚಾಯತ್ ತೋಟಗಾರಿಕೆ ಉಪ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

Also read: Spices Board conducts Buyer Seller Meet for small cardamom

Recent post

Subscribe to our newsletter!

Other related posts

error: Content is protected !!