ರೈತಸಂತೆ – ನೋಂದಣಿಗೆ ಸೂಚನೆ

 ರೈತಸಂತೆ – ನೋಂದಣಿಗೆ ಸೂಚನೆ
Share this post

ಉಡುಪಿ, ಜನವರಿ 05 2021: ಉಡುಪಿ ಜಿಲ್ಲೆಯ ದೊಡ್ಡಣಗುಡ್ಡೆಯ ಶಿವಳ್ಳಿ ತೋಟಗಾರಿಕೆ ಕ್ಷೇತ್ರದ ರೈತ ಸೇವಾಕೇಂದ್ರದ ಆವರಣದಲ್ಲಿ ಪ್ರತಿ ಗುರುವಾರ ರೈತಸಂತೆ ನಡೆಯಲಿದೆ.

ರೈತ ಸಂತೆಯಲ್ಲಿ ಭಾಗವಹಿಸಲು ಇಚ್ಛಿಸುವ ರೈತರು ಹಾಗೂ ಇತರೆ ಯಾವುದೇ ರೈತ ಸಂಘ, ಸಂಸ್ಥೆಗಳು ನೋಂದಣಿ ಮಾಡಿಕೊಳ್ಳಬೇಕು.

ಆಸಕ್ತರು ನೋಂದಣಿ ಅರ್ಜಿಯನ್ನು ಜನವರಿ 25 ರ ಒಳಗೆ

  • ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಜಿಲ್ಲಾ
    ಪಂಚಾಯತ್ ಉಡುಪಿ, ದೂ.ಸಂ:0820-2522837
  • ಕುಂದಾಪುರ ದೂ. ಸಂ:08254-230813,
  • ಕಾರ್ಕಳ ದೂ.ಸಂ: 08258-230288,
  • ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ ಉಡುಪಿ ದೂ.ಸ: 0820-2520590

ಈ ಕಛೇರಿಗಳಲ್ಲಿ ಪಡೆದು, ಫೋಟೋ, ಆಧಾರ್ ಕಾರ್ಡ್, ಪಹಣಿಯೊಂದಿಗೆ ನೋಂದಣಿ ಮಾಡಿಕೊಳ್ಳುವಂತೆ ಜಿಲ್ಲಾ ಪಂಚಾಯತ್ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:

ಹಿಂಗಾರು ಬೆಳೆ ಸಮೀಕ್ಷೆ ಪ್ರಾರಂಭ

ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ: ನೋಂದಣಿ ಅವಧಿ ವಿಸ್ತರಣೆ

Subscribe to our newsletter!

Other related posts

error: Content is protected !!