ಜಗಜೀವನರಾಮ ನಗರ ವಿದ್ಯುತ್ ಚಿತಾಗಾರ ಲೋಕಾರ್ಪಣೆ

 ಜಗಜೀವನರಾಮ ನಗರ ವಿದ್ಯುತ್ ಚಿತಾಗಾರ ಲೋಕಾರ್ಪಣೆ
Share this post
  • ಬಿಬಿಎಂಪಿ ವ್ಯಾಪ್ತಿಯಲ್ಲಿ 11 ಚಿತಾಗಾರಗಳಿದ್ದು, ಇಂದು ಲೋರ್ಕಾಪಣೆಗೊಳಿಸಿರುವುದು ಸೇರಿ 12 ಚಿತಾಗಾರಗಳಾಗಲಿವೆ.
  • ನಗರದಲ್ಲಿ ಪ್ರತಿನಿತ್ಯ ಕೋವಿಡ್ ಹಾಗೂ ನಾನ್-ಕೋವಿಡ್ ಸೇರಿ 165 ಮೃತ ದೇಹಳ ಶವ ಸಂಸ್ಕಾರ ಮಾಡಬಹುದು.
  • 12 ಚಿತಾಗಾರಗಳಲ್ಲಿ ಪಣತ್ತೂರು, ಕೂಡ್ಲು, ಕೆಂಗೇರಿ, ಮೇಡಿ ಅಗ್ರಹಾರ(ಯಲಹಂಕ)ದಲ್ಲಿರುವ 4 ಚಿತಾಗಾರಗಳಲ್ಲಿ ಕೋವಿಡ್ ಹಾಗೂ ಇನ್ನುಳಿದ 8 ಚಿತಾಗಾರಗಳಲ್ಲಿ ನಾನ್-ಕೋವಿಡ್ ಶವ ಸಂಸ್ಕಾರ ಮಾಡಲಾಗುತ್ತಿದೆ

ಬೆಂಗಳೂರು, ಅ 03: ಬಿಬಿಎಂಪಿ ಪಶ್ಚಿಮ ವಲಯ ಜಗಜೀವನರಾಮ ನಗರ ವಾರ್ಡ್-136ರಲ್ಲಿ ನೂತನವಾಗಿ ನವೀಕೃತಗೊಳಿಸಿರುವ ವಿದ್ಯುತ್ ಚಿತಾಗಾರವನ್ನು ಶಾಸಕ ಬಿ.ಝಡ್.ಜಮೀರ್ ಅಹಮದ್ ಖಾನ್, ಮಾನ್ಯ ಆಡಳಿತಾಧಿಕಾರಿ ಗೌರವ್ ಗುಪ್ತ, ಹಾಗೂ ಆಯುಕ್ತರಾದ ಮಂಜುನಾಥ್ ಪ್ರಸಾದ್ ಇಂದು ಲೋಕಾರ್ಪಣೆಗೊಳಿಸಿದರು.

ಈ ವೇಳೆ ಜಂಟಿ ಆಯುಕ್ತರು ಶ್ರೀ ಚಿದಾನಂದ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಜಗಜೀವನರಾಮ ನಗರ ವಾರ್ಡ್ ನಲ್ಲಿ ವಿದ್ಯುತ್ ಚಿತಾಗರದ ನವೀಕೃತ ಕಾಮಗಾರಿಯು ಒಂದು ವರ್ಷದಿಂದ ಸ್ಥಗಿತಗೊಂಡಿತ್ತು. ಈ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿತ್ತು. ಅದರಂತೆ ಗುತ್ತಿಗೆದಾರರು ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿದ್ದು, ಇಂದು ಸಾರ್ವಜನಿಕ ಸೇವೆಗೆ ಅನುವು ಮಾಡಿಕೊಡಲಾಗಿದೆ ಎಂದು ಆಯುಕ್ತರು ತಿಳಿಸಿದರು.

ಚಿತಾಗಾರವನ್ನು 1.90 ಕೋಟಿ ರೂ. ವೆಚ್ಚದಲ್ಲಿ ಸಿವಿಲ್ ವರ್ಕ್ ಅಡಿ ನೂತನವಾಗಿ ನವೀಕೃತಗೊಳಿಸಲಾಗಿದೆ.

ಪೂಜೆ-ವಿಧಿ-ವಿಧಾನಗಳು ನಡೆಸಲು ಸ್ಥಳಾವಕಾಶ, ಕೂರಲು ಆಸನಗಳ ವ್ಯವಸ್ಥೆ, ವಿಶ್ರಾಂತಿ ಪಡೆಯಲು ತಂಗುದಾಣ, ಕುಡಿಯುವ ನೀರಿನ ವ್ಯವಸ್ಥೆ, ಸ್ನಾನದ ಕೊಠಡಿ, ಶೌಚಾಲಯ ವ್ಯವಸ್ಥೆ, ವಾಹನಗಳಿಗೆ ನಿಲುಗಡೆಗೆ ಸುಸಜ್ಜಿತ ಸ್ಥಳ ನಿರ್ಮಾಣ, ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ.

ಚಿತಾಗಾರದ ಪಕ್ಕ ಉದ್ಯಾನವನ ಇನ್ನೊಂದು ತಿಂಗಳಲ್ಲಿ ಲೋಕಾರ್ಪಣೆಗೊಳಿಸಲಾಗುವುದು. ಈ ಹಿಂದೆ ಸ್ಥಳೀಯರು ವಿಲ್ಸನ್ ಗಾರ್ಡನ್‌ಗೆ ಹೋಗಬೇಕಿತ್ತು. ಇದೀಗ ಜಗಜೀವನ ರಾಮನಗರದಲ್ಲಿ ಅತ್ಯಾಧುನಿಕ ವಿದ್ಯುತ್ ಚಿತಾಗಾರವನ್ನು ನವೀಕರಣಗೊಳಿಸಿದ್ದು, ಸ್ಥಳೀಯರಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ 11 ಚಿತಾಗಾರಗಳಿದ್ದು, ಇಂದು ಲೋರ್ಕಾಪಣೆಗೊಳಿಸಿರುವುದು ಸೇರಿ 12 ಚಿತಾಗಾರಗಳಾಗಲಿವೆ. ನಗರದಲ್ಲಿ ಪ್ರತಿನಿತ್ಯ ಕೋವಿಡ್ ಹಾಗೂ ನಾನ್-ಕೋವಿಡ್ ಸೇರಿ 165 ಮೃತ ದೇಹಳ ಶವ ಸಂಸ್ಕಾರ ಮಾಡಬಹುದು. 12 ಚಿತಾಗಾರಗಳಲ್ಲಿ ಪಣತ್ತೂರು, ಕೂಡ್ಲು, ಕೆಂಗೇರಿ, ಮೇಡಿ ಅಗ್ರಹಾರ(ಯಲಹಂಕ)ದಲ್ಲಿರುವ 4 ಚಿತಾಗಾರಗಳಲ್ಲಿ ಕೋವಿಡ್ ಹಾಗೂ ಇನ್ನುಳಿದ 8 ಚಿತಾಗಾರಗಳಲ್ಲಿ ನಾನ್-ಕೋವಿಡ್ ಶವ ಸಂಸ್ಕಾರ ಮಾಡಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

Subscribe to our newsletter!

Other related posts

error: Content is protected !!