ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವರ ಸನ್ನಿಧಿಯಲ್ಲಿ, ಕೃಷ್ಣ ನಾಗೇಶ ಪೈ ಬರೆದ ಕಟೀಲು ಪೈ ಕುಟುಂಬದ ಧಾರ್ಮಿಕ ನಂಬಿಕೆಗಳು ಮತ್ತು ಆಚರಣೆಗಳು ಕೃತಿಯನ್ನು ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಅನಾವರಣಗೊಳಿಸಿದರು. ಉದ್ಯಮಿ ಮಂಗಲ್ಪಾಡಿ ನರೇಶ್ ಶೆಣೈ, ಹನುಮಂತ ಕಾಮತ್, ಪಾಂಡುರಂಗ ಭಟ್, ದೇವದಾಸ ಮಲ್ಯ, ಶ್ರೀಮತಿ ಸಂಧ್ಯಾ ಪೈ, ನಾಗೇಶ್ ಪೈ, ಹರೀಶ್ ಪೈ ಕತ್ತಲ್ಸಾರ್ ಮತ್ತಿತರರಿದ್ದರು.