ಮಂಗಳೂರು: ಕಳೆದ ನಾಲ್ಕು ದಿನಗಳಿಂದ ಸತತವಾಗಿ ಸುರಿದ ಮಳೆಯಿಂದಾಗಿ ಇಲ್ಲಿನ ಬಂದರು ಪೋರ್ಟ್ ರಸ್ತೆಯಲ್ಲಿ ನೀರು ನಿಂತು ಅಯೋಮಯವಾಗಿತ್ತು. ಈ ಸಂದರ್ಭ ಇಲ್ಲಿ ಕರ್ತವ್ಯದಲ್ಲಿದ್ದ ಗೃಹ ರಕ್ಷಕ ದಳದ ಸಿಬ್ಬಂದಿ ಅಬ್ದುಲ್ ರವೂಫ್ ಅವರು ಮುತುವರ್ಜಿ ವಹಿಸಿ ಜೆಸಿಬಿ ತರಿಸುವ ಮೂಲಕ ನೀರು ತುಂಬಿದ್ದ ರಸ್ತೆಗೆ ಜಲ್ಲಿ ಹಾಕಿ ರಸ್ತೆಯನ್ನು ಸರಿ ಪಡಿಸುವ ಮೂಲಕ ಸ್ಥಳೀಯರ ಪ್ರಶಂಸೆಗೆ ಪಾತ್ರರಾದರು.