ಶ್ರೀಕೃಷ್ಣಮಠದಲ್ಲಿ ದೀಪಾವಳಿ ಪ್ರಯುಕ್ತ ಎಣ್ಣೆಶಾಸ್ತ್ರ, ತೈಲಾಭ್ಯಂಗ

 ಶ್ರೀಕೃಷ್ಣಮಠದಲ್ಲಿ ದೀಪಾವಳಿ ಪ್ರಯುಕ್ತ ಎಣ್ಣೆಶಾಸ್ತ್ರ, ತೈಲಾಭ್ಯಂಗ
Share this post

ಉಡುಪಿ, ನ 04, 2021: ಶ್ರೀಕೃಷ್ಣಮಠದಲ್ಲಿ ದೀಪಾವಳಿ ಪ್ರಯುಕ್ತ ಎಣ್ಣೆಶಾಸ್ತ್ರ ಹಾಗೂ ತೈಲಾಭ್ಯಂಗ ನಡೆಯಿತು.

ಪ್ರಾತಃ ಕಾಲದ 5.39 ರ ಚಂದ್ರೋದಯ ಕಾಲದಲ್ಲಿ ಚಂದ್ರಶಾಲೆಯಲ್ಲಿ ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರಿಗೆ ಪರ್ಯಾಯ ಮಠದ ಪಾರುಪತ್ಯಗಾರರಾದ ವಿದ್ವಾನ್ ಮುದರಂಗಡಿ ಲಕ್ಷ್ಮೀಶಾಚಾರ್ಯರು ಎಣ್ಣೆಶಾಸ್ತ್ರ ಮಾಡಿದರು.

ನಂತರ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರಿಗೆ, ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರಿಗೆ,ಪಲಿಮಾರು ಕಿರಿಯ ಶ್ರೀವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರಿಗೆ ಎಣ್ಣೆಶಾಸ್ತ್ರ ಮಾಡಿದರು. ಪರ್ಯಾಯ ಮಠದ ಪಾರುಪತ್ಯಗಾರರು ಶ್ರೀಪಾದರುಗಳಿಗೆ ಮಾಲಿಕೆ ಮಂಗಳಾರತಿ ಮಾಡುವುದರೊಂದಿಗೆ ಹೊಸವಸ್ತ್ರ ಸಮರ್ಪಿಸಿದರು.

Subscribe to our newsletter!

Other related posts

error: Content is protected !!