ಮಂಗಳೂರು: ನೀರು ಸರಬರಾಜಿನಲ್ಲಿ ವ್ಯತ್ಯಯ

 ಮಂಗಳೂರು: ನೀರು ಸರಬರಾಜಿನಲ್ಲಿ ವ್ಯತ್ಯಯ
Share this post

ಮಂಗಳೂರು, ಫೆಬ್ರವರಿ 18, 2021: ಮಂಗಳೂರು ಮಹಾನಗರಪಾಲಿಕೆಯು ತುಂಬೆ ರೇಚಕ ಸ್ಥಾವರದಿಂದ ಬೆಂದೂರು, ಪಣಂಬೂರು ಕಡೆಗೆ ನೀರು ಸರಬರಾಜು ಮಾಡುವ 1000 ವ್ಯಾಸದ ಮುಖ್ಯ ಕೊಳವೆಯ ದುರಸ್ತಿ ಕಾರ್ಯವನ್ನು ಫೆಬ್ರವರಿ 19 ರಂದು ಬೆಳಿಗ್ಗೆ 6 ಗಂಟೆಯಿಂದ ಫೆಬ್ರವರಿ 20 ರಂದು ಬೆಳಿಗ್ಗೆ 6 ಗಂಟೆಯವರೆಗೆ ನಡೆಸಲಿದೆ.

ಕೊಳವೆಯು ರಾಷ್ಟ್ರೀಯ ಹೆದ್ದಾರಿ 173 ರಲ್ಲಿ ಕಣ್ಣೂರು ಶೆಲ್ ಪೆಟ್ರೋಲ್ ಪಂಪ್ ಹತ್ತಿರ ಸೋರುವಿಕೆ ಉಂಟಾಗಿರುವ ಹಿನ್ನೆಲೆಯಲ್ಲಿ ದುರಸ್ತಿ ಕಾರ್ಯವು ನಡೆಯಲಿದೆ .

ಈ ಅವಧಿಯಲ್ಲಿ ಸುರತ್ಕಲ್, ಪಣಂಬೂರು, ಕಾನಾ ಬಾಳ, ಕೂಳೂರು, ಕಾವೂರು ಭಾಗಶಃ, ಬೆಂದೂರು ಭಾಗಶಃ, ಕಾರ್‍ಸ್ಟ್ರೀಟ್, ಕೋಡಿಕಲ್, ಆಕಾಶಭವನ ಇತ್ಯಾದಿ ಪ್ರದೇಶಗಳಲ್ಲಿ ನೀರಿನ ವಿತರಣೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗುವುದು ಎಂದು ಮಹಾನಗರ ಪಾಲಿಕೆಯ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!