ಫೆ. 16ರಂದು ‘ಚಿಗುರು ಸಾಂಸ್ಕೃತಿಕ’ ಕಾರ್ಯಕ್ರಮ

 ಫೆ. 16ರಂದು ‘ಚಿಗುರು ಸಾಂಸ್ಕೃತಿಕ’ ಕಾರ್ಯಕ್ರಮ
Share this post

ಕಾರವಾರ ಫೆ. 15, 2021: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕುಮಟಾದ ಶಾಂತಿಕಾ ಪರಮೇಶ್ವರಿ ಸಭಾಭವನ ಹೆಗಡೆಯಲ್ಲಿ ಫೆ. 16ರಂದು ಬೆಳಗ್ಗೆ 10.30ಕ್ಕೆ ‘ಚಿಗುರು ಸಾಂಸ್ಕೃತಿಕ’ ಕಾರ್ಯಕ್ರಮ ನಡೆಯಲಿದೆ.

ವಿಧಾನ ಸಭೆ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಘನ ಉಪಸ್ಥಿತಿಯಲ್ಲಿ ಸಾಂಸ್ಕøತಿಕ ಉತ್ಸವ ಜರುಗಲಿದ್ದು, ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕ ದಿನಕರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ವಿವಿಧ ಕಲಾ ತಂಡಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ದಾಸರ ಪದ, ಜಾನಪದ ಗೀತೆ, ಸಮೂಹ ನೃತ್ಯ ರೂಪಕ, ಕೂಚಿಪೂಡಿ, ಯಕ್ಷಗಾನ ಮತ್ತು ಏಕಪಾತ್ರಾಭಿನಯ ಪ್ರದರ್ಶನ ನಡೆಯಲಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಎನ್.ಜಿ. ನಾಯ್ಕ್ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!