ಫೆ 13 ರಂದು ಕಾಶೀ ಮಠಾಧೀಶರ ದಿಗ್ವಿಜಯ ಮಹೋತ್ಸವ

 ಫೆ 13 ರಂದು ಕಾಶೀ ಮಠಾಧೀಶರ ದಿಗ್ವಿಜಯ ಮಹೋತ್ಸವ
Share this post

ಮಂಗಳೂರು ಫೆ 12, 2021: ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮೀಂದ್ರತೀರ್ಥರ ದಿಗ್ವಿಜಯ ಮಹೋತ್ಸವ ದಿನಾಂಕ ಫೆ 13 ರಂದು ಬಹಳ ವಿಜೃಂಭಣೆಯಿಂದ ನಡೆಯಲಿದೆ.

ಅಂದು ರಾತ್ರಿ 7.00 ಘಂಟೆಗೆ ಶ್ರೀಗಳವರ ದಿಗ್ವಿಜಯ ಶೋಭಾಯಾತ್ರೆ ಶ್ರೀ ದೇವಳದಿಂದ ಹೊರಟು ಮಹಾಮಾಯಾದೇವಳ , ನವಭಾರತ್ ಸರ್ಕಲ್ , ಡೊಂಗರಕೇರಿ ಮೂಲಕ ನ್ಯೂ ಚಿತ್ರ ಜುಂಕ್ಷನ್ ನಿಂದ  ಎಡಬದಿಗೆ ತಿರುಗಿ ಸ್ವದೇಶಿ ಸ್ಟೋರ್ ಮೂಲಕ  ಶ್ರೀದೇವಳಕ್ಕೆ ತಲುಪುವುದು. 

ಮಧ್ಯಾಹ್ನ ಪೊಜೆಯ ಬಳಿಕ ಸಮಾರಾಧನೆ ಇರುವುದು.

ಹೊರ ಊರಿನಿಂದ ಆಗಮಿಸುವ ಭಜಕರಿಗೆ ನವಭಾರತ್ ಸರ್ಕಲ್ ಬಳಿ ಫಲ , ಮಂತ್ರಾಕ್ಷತೆ  ಪಡೆಯುವ ವ್ಯವಸ್ಥೆ ಮಾಡಲಾಗಿದ್ದು , ಮಂಗಳೂರಿನ ಸಮಾಜ ಭಾಂದವರು ಡೊಂಗರಕೇರಿ , ನ್ಯೂ ಚಿತ್ರ ಹಾಗೂ ಶ್ರೀ ದೇವಳದ ಮುಂಭಾಗದಲ್ಲಿ ಶ್ರೀಗಳವರಿಂದ ಫಲ , ಮಂತ್ರಾಕ್ಷತೆ  ಪಡಕೊಳ್ಳಬಹುದು. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹರಿಗುರು ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ದೇವಳದ ಆಡಳಿತ ಮಂಡಳಿ  ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!