ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಐದನೇ ಪುಣ್ಯತಿಥಿ

 ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಐದನೇ  ಪುಣ್ಯತಿಥಿ
Share this post

ಮಂಗಳೂರು, ಜನವರಿ 21, 2021: ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಐದನೇ ಪುಣ್ಯತಿಥಿ ಆರಾಧನೆ ಈ ಬಾರಿ ಮಂಗಳೂರಿನ ಶ್ರೀ ವೆಂಕಟರಮಣ ದೇವಳದಲ್ಲಿ ಕಾಶಿ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ನಡೆಯಿತು .

ರಾತ್ರಿ ಶ್ರೀ ದೇವಳದಲ್ಲಿ ವಿಶೇಷ ಸ್ವರ್ಣ ಗರುಡೋತ್ಸವ , ಪ್ರಧಾನ ಶ್ರೀ ವೇದವ್ಯಾಸ ದೇವರಿಗೆ ಕನಕಾಭಿಷೇಕ, ಗಂಗಾಭಿಷೇಕ , ಲಘು ವಿಷ್ಣು ಅಭಿಷೇಕಗಳು ನಡೆಯಿತು . ಸಂಸ್ಥಾನದ ಶ್ರೀ ವೇದವ್ಯಾಸ ದೇವರಿಗೆ  ಸ್ವರ್ಣ ಗರುಡ ವಾಹನ ಸೇವೆ ಶ್ರೀಗಳವರಿಂದ ನಡೆಯಿತು .

ಈ ಸಂದರ್ಭದಲ್ಲಿ ಶ್ರೀ ದೇವಳದ ಮೊಕ್ತೇಸರರಾದ ಸಿ . ಎಲ್ . ಶೆಣೈ , ಕೆ ಪಿ ಪ್ರಶಾಂತ್ ರಾವ್ , ರಾಮಚಂದ್ರ ಕಾಮತ್ , ಉಪಸ್ಥಿತರಿದ್ದರು . 

ಚಿತ್ರ : ಮಂಜು ನೀರೇಶ್ವಾಲ್ಯ

Subscribe to our newsletter!

Other related posts

error: Content is protected !!