ಸರ್ಕಾರಿ ಭರವಸೆಗಳ ಸಮಿತಿ ಅಧ್ಯಕ್ಷರಾಗಿ ರಘುಪತಿ ಭಟ್ ನೇಮಕ

 ಸರ್ಕಾರಿ ಭರವಸೆಗಳ ಸಮಿತಿ ಅಧ್ಯಕ್ಷರಾಗಿ ರಘುಪತಿ ಭಟ್  ನೇಮಕ
Share this post

ರಘುಪತಿ ಭಟ್, ಹರೀಶ್ ಪೂಂಜ , ಸಂಜೀವ ಮಠಂದೂರು ಸಹಿತ 14 ಸದಸ್ಯರ ಸಮಿತಿ

ರಘುಪತಿ ಭಟ್

ಉಡುಪಿ, ನ 10 : 2020 – 21 ನೇ ಸಾಲಿನ ಕರ್ನಾಟಕ ವಿಧಾನಮಂಡಲ/ವಿಧಾನಸಭೆಯ ವಿವಿಧ ಸ್ಥಾಯಿ ಸಮಿತಿಗಳಿಗೆ ಸದಸ್ಯರುಗಳನ್ನು ನಾಮನಿರ್ದೇಶನ ಮಾಡಲಾಗಿದ್ದು, ಮಾನ್ಯ ಸಭಾಧ್ಯಕ್ಷರು ಉಡುಪಿ ಶಾಸಕ ಶ್ರೀ ಕೆ. ರಘುಪತಿ ಭಟ್ ಅವರನ್ನು ಸರ್ಕಾರಿ ಭರವಸೆಗಳ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಿರುತ್ತಾರೆ.

ಈ ಸಮಿತಿಯಲ್ಲಿ ಕರಾವಳಿಯ ರಘುಪತಿ ಭಟ್, ಹರೀಶ್ ಪೂಂಜ, ಸಂಜೀವ ಮಠಂದೂರು ಸಹಿತ ೧೪ ಮಂದಿ ಸದಸ್ಯರಿದ್ದಾರೆ.

Subscribe to our newsletter!

Other related posts

error: Content is protected !!