ಆರೋಗ್ಯ ಕಾರ್ಯಕರ್ತರ ಭೇಟಿ ವೇಳೆ ಮಾಹಿತಿ ನೀಡಲು ಕೋರಿಕೆ

 ಆರೋಗ್ಯ ಕಾರ್ಯಕರ್ತರ ಭೇಟಿ ವೇಳೆ ಮಾಹಿತಿ ನೀಡಲು ಕೋರಿಕೆ
Share this post

ಮಂಗಳೂರು ಆ.18, 2021: ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ಕಾರ್ಯಕ್ರಮವನ್ನು ಕೋವಿಡ್- 19 ನಿಂದ ಚೇತರಿಸಿಕೊಂಡ ವ್ಯಕ್ತಿಗಳ ಹಾಗೂ ಅವರ ಮನೆಯಲ್ಲಿರುವ ಸಂಪರ್ಕಿತರ ಸಮೀಕ್ಷೆಯ ಚಟುವಟಿಕೆಯನ್ನು ಇದೇ ಆಗಸ್ಟ್ 16 ರಿಂದ 31 ರವರೆಗೆ ಜಿಲ್ಲೆಯ ಎಲ್ಲಾ ಕ್ಷಯ ಚಿಕಿತ್ಸಾ ಘಟಕಗಳ ಸಂಬಂಧಪಟ್ಟ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ.

ಕೋವಿಡ್- 19 ನಿಂದ ಚೇತರಿಸಿಕೊಂಡ ವ್ಯಕ್ತಿಗಳ ಹಾಗೂ ಆವರ ಮನೆಯಲ್ಲಿರುವ ಸಂಪರ್ಕಿತರನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ಕ್ಷೇತ್ರ ಸಿಬ್ಬಂದಿ ವೈಯುಕ್ತಿಕವಾಗಿ ಭೇಟಿ ಮಾಡಿ, ಮೌಖಿಕವಾಗಿ ಕ್ಷಯ ರೋಗದ ಲಕ್ಷಣದ ಬಗ್ಗೆ ತಪಾಸಣೆಗೆ ಮಾಡಬೇಕು. (ಕ್ಷಯರೋಗದ ಲಕ್ಷಣಗಳಾದ 2 ವಾರಕ್ಕಿಂತ ಹೆಚ್ಚು ಕೆಮ್ಮು, ಜ್ವರ, ಗಮನಾರ್ಹವಾಗಿ ತೂಕ ನಷ್ಟ, ರಾತ್ರಿ ಬೆವರುವಿಕೆ ಇತ್ಯಾದಿ), ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನದಲ್ಲಿ ಸಿಬ್ಬಂದಿಗಳು ಕೋವಿಡ್-19 ಸೋಂಕಿನ ಮುಂಜಾಗ್ರತೆಯನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಈ ಕಾರ್ಯಕ್ರಮವನ್ನು ನಡೆಸಲಿದ್ದಾರೆ.

ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನವನ್ನು ಕೋವಿಡ್-19 ನಇಂದ ಚೇತರಿಸಿಕೊಂಡ ವ್ಯಕ್ತಿಗಳ ಮತ್ತು ಅವರ ಮನೆಯಲ್ಲಿರುವ ಸಂಪರ್ಕಿತರ ಸಮೀಕ್ಷೆಯ ಚಟುವಟಿಕೆಯನ್ನು ಆ.16 ರಿಂದ 31ರ ವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಕ್ಷಯ ಚಿಕಿತ್ಸಾ ಘಟಕಗಳ ಸಂಬಂಧಿಸಿದ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿದೆ.  

ಈ ಸಂದರ್ಭದಲ್ಲಿ ಆರೋಗ್ಯ ಕಾರ್ಯಕರ್ತರು ಮನೆಗೆ ಭೇಟಿ ನೀಡಿ ಮಾಹಿತಿ ಕೇಳಿದ ಸಂದರ್ಭದಲ್ಲಿ ಕೋವಿಡ್-19 ರಿಂದ ಚೇತರಿಸಿಕೊಂಡ ವ್ಯಕ್ತಿಗಳು ಹಾಗೂ ಅವರ ಮನೆಯಲ್ಲಿರುವ ಸಂಪರ್ಕಿತರು ಮಾಹಿತಿ ನೀಡಿ ಮತ್ತು ಕ್ಷಯರೋಗದ ಲಕ್ಷಣಗಳು ಕಂಡುಬಂದಲ್ಲಿ ಆರೋಗ್ಯ ಕಾರ್ಯಕರ್ತರ ಸೂಚನೆಯಂತೆ ಕಫ ಪರೀಕ್ಷೆಯನ್ನು ಮಾಡುವಂತೆ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!