ಶಾಸಕ ಕೆ. ಹರೀಶ್ ಕುಮಾರ್ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಅನುದಾನ ಬಿಡುಗಡೆ

 ಶಾಸಕ ಕೆ. ಹರೀಶ್ ಕುಮಾರ್ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಅನುದಾನ ಬಿಡುಗಡೆ
Share this post

ಮಂಗಳೂರು ಆಗಸ್ಟ್ 27: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ವಿಧಾನಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್ ಇವರ 2018-19 ನೇ ಸಾಲಿನ ಅನುದಾನ ಬಿಡುಗಡೆ 

  1. ಬಹ್ಮಶ್ರೀ ನಾರಾಯಣ ಗುರು ಸೇವಾ ಬಿಲ್ಲವ ಸಂಘ (ರಿ), ಇರಾ ಬಂಟ್ವಾಳ ತಾಲೂಕು ಇಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ರೂ. 5 ಲಕ್ಷ 
  2. ಮಂಗಳೂರು ತಾಲೂಕಿನ ಬಜಾಲ್ ಗ್ರಾಮದ ಬದ್ರಿಯಾ ಶಾಲೆಗೆ ಹೈಮಾಸ್ಕ್ ದೀಪ ಅಳವಡಿಕೆಗೆ ರೂ. 1 ಲಕ್ಷ
  3. ಬೆಳ್ತಂಗಡಿ ತಾಲೂಕಿನ ಬಡಕಾರಂದೂರು ಗ್ರಾಮದ ಸುಲ್ಕೇರಿ ಮುಗುರು ಕ್ರಾಸ್ ಬಳಿ ರಿಕ್ಷಾ ಪಾರ್ಕಿಂಗ್‍ಗೆ ರೂ. 3 ಲಕ್ಷ
  4. ಬೆಳ್ತಂಗಡಿ ತಾಲೂಕಿನ ಕಣಿಯೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ  ರೂ. 3 ಲಕ್ಷ
  5. ಮಂಗಳೂರು ತಾಲೂಕಿನ ಗಣೇಶ್‍ಪುರ ಕಾಟಿಪಳ್ಳದ ಶ್ರೀ ನಿತ್ಯಾನಂದ ಭಜನಾ ಮಂದಿರ (ರಿ) ಸಮುದಾಯ ಭವನದ ಕಾಮಗಾರಿಗೆ ರೂ. 3 ಲಕ್ಷ
  6. ಬೆಳ್ತಂಗಡಿ ತಾಲೂಕಿನ ಯುವಜನ ಇಲಾಖೆ ಕಬಡ್ಡಿ ಮ್ಯಾಟ್‍ಗೆ ರೂ. 3 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ.

2019-20ನೇ ಸಾಲಿನ ಅನುದಾನದಲ್ಲಿ 
  1. ಬೆಳ್ತಂಗಡಿ ತಾಲೂಕಿನ ದ.ಕ. ಜಿ.ಪಂ.ಕಿ.ಪ್ರಾ.ಶಾಲೆ ಮುಂಡೂರು ಇಲ್ಲಿನ ಆಟದ ಮೈದಾನ ವಿಸ್ತರಣೆಗೆ ರೂ. 3 ಲಕ್ಷ
  2. ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಜಾರ್ಜ್ ಮುಂಡಾಡಿ – ಚೊಂಡೆಲ್ ಅಂಗಡಿ ಬಳಿ ಮೋರಿ ರಚನೆಗೆ ರೂ. 1 ಲಕ್ಷ
  3. ಸುಳ್ಯ ತಾಲೂಕಿನ ದ.ಕ. ಜಿ.ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಯ ಇದರ ಅಮೃತ ಭವನದ ಮೇಲ್ಛಾವಣಿ ನವೀಕರಣ ಹಾಗೂ ಕಟ್ಟಡ ದುರಸ್ತಿಗೆ ರೂ. 3 ಲಕ್ಷ, 
  4. ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮದ ಪಡ್ಯೊಡಿ ಕೂಡಮಣಿ ರಸ್ತೆ ಅಭಿವೃದ್ಧಿಗೆ ರೂ. 5 ಲಕ್ಷ
  5. ಮಂಗಳೂರು ತಾಲೂಕಿನ ಉಳ್ಳಾಲ್ತಿ ಅಮ್ಮನವರ ಕ್ಷೇತ್ರ ಬೊಳ್ಮ ಕೊಣಾಜೆ ಗ್ರಾಮ ಹತ್ತಿರ ಹೈಮಾಸ್ಕ್ ದೀಪ ಅಳವಡಿಕೆಗೆ ರೂ. 1 ಲಕ್ಷ
  6. ಬೆಳ್ತಂಗಡಿ ತಾಲೂಕಿನ ಹಳೆ ಪೇಟೆ ಉಜಿರೆ ಸರಕಾರಿ ಪ್ರೌಢಶಾಲೆಯ ಸಭಾಂಗಣ ನಿರ್ಮಾಣಕ್ಕೆ ರೂ. 2 ಲಕ್ಷ
  7. ಬೆಳ್ತಂಗಡಿ ತಾಲೂಕಿನ ನಡಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ದುರಸ್ತಿಗೆ ರೂ. 2 ಲಕ್ಷ
  8. ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಅಗಂಬಾಡಿ ನೆರಿಯ ಕಾಡು ಇಲ್ಲಿ ಮೋರಿ ವಿಸ್ತರಣೆಗೆ ರೂ. 1 ಲಕ್ಷ
  9. ಬೆಳ್ತಂಗಡಿ ತಾಲೂಕಿನ ಚಿಬಿದ್ರೆ ಗ್ರಾಮದ ಕಾರುಣ್ಯ ಎಜುಕೇಶನ್ ಫೌಂಡೇಶನ್ ಆಂಗ್ಲ ಮಾಧ್ಯಮ ಶಾಲಾ ಕಕ್ಕಿಂಜೆ ಇದರ ದುರಸ್ತಿ ಕಾಮಗಾರಿಗೆ ರೂ. 5 ಲಕ್ಷ
  10. ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮದ ಚಂದ್ಕೂರು ದೇವಸ್ಥಾನದ ಬಳಿ ರಸ್ತೆ ರಚನೆಗೆ ರೂ. 2 ಲಕ್ಷ
  11. ಮಂಗಳೂರು ತಾಲೂಕಿನ ಉಳ್ಳಾಲ್ತಿ ಅಮ್ಮನವರ ಕ್ಷೇತ್ರ ಬೊಳ್ಮ ಕೊಣಾಜೆ ಗ್ರಾಮ ಹತ್ತಿರ ಹೈಮಾಸ್ಕ್ ದೀಪ ಅಳವಡಿಕೆಗೆ ರೂ. 1 ಲಕ್ಷ
  12. ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಕಾಜೂರು ದರ್ಗಾ ಬಳಿ ಹೈಮಾಸ್ಕ್ ದೀಪ ಅಳವಡಿಕೆ ಕಾಮಗಾರಿಗೆ ರೂ. 1.50 ಲಕ್ಷ ಅನುದಾನ ಮಂಜೂರು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Subscribe to our newsletter!

Other related posts

error: Content is protected !!